ಬೀದರ್: ವಂದೇ ಮಾತರಂ ಸ್ಕೂಲ್, ನ್ಯೂ ಝೀರಾ ಮಿನರಲ್ ವಾಟರ್ ಹಾಗೂ ವೀರಭದ್ರ ಎಂಟರ್ಪ್ರೈಸೆಸ್ನ ಶ್ರೀ ಸಿಮೆಂಟ್ ವತಿಯಿಂದ ನಗರದ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಭಾನುವಾರ ಕೋವಿಡ್ ಸೋಂಕಿತರು, ಅವರ ಸಂಬಂಧಿಕರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಆಹಾರ ಪೊಟ್ಟಣ ವಿತರಿಸಲಾಯಿತು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಆಹಾರ ಪೊಟ್ಟಣ ವಿತರಿಸಿದರು. ಜಿ.ಎನ್. ಆಸ್ಪತ್ರೆಯ ನಿರ್ದೇಶಕ ಆಕಾಶ ಪಾಟೀಲ ಅಯಾಸಪುರ, ಭೀಮ, ಸಂಗಮೇಶ ಬಿರಾದಾರ, ಸಾಯಿ ಮೂಲಗೆ ಇದ್ದರು.