‘ತಾಲ್ಲೂಕು ಅರಣ್ಯ ಇಲಾಖೆ ತಕ್ಷಣ ದೇವಗಿರಿ, ಚಾಂಗಲೇರಾ, ನಿರ್ಣಾ, ಉಡಬಾಳ ಮಧ್ಯದ ಅರಣ್ಯ ಪ್ರದೇಶ, ನಾಗನಕೇರಾ ಅರಣ್ಯ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ಸಂಗ್ರಹಿಸಿ ಪೂರೈಸುವ ಕಾರ್ಯ ಆರಂಭಿಸಬೇಕು’ ಎಂದು ಮುತ್ತಂಗಿ ಸಾವಯವ ಬೇಸಾಯ ರೈತ ಮಲ್ಲಯ್ಯ ಸ್ವಾಮಿ ಆಗ್ರಹಿಸಿದ್ದಾರೆ.