ಹಳ್ಳಿಖೇಡ ಬಿ: ಇಲ್ಲಿನ ಡಾ ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ರವಿ ಕಲ್ಯಾಣಿ ಧ್ವಜಾರೋಹಣ ನೆರವೇರಿಸಿದರು. ಉಪನ್ಯಾಸಕರಾದ ಮಹಮ್ಮದ್ ಮುಜಾಹಿದೀನ್ ಪಾಷಾ, ವೈಜಿನಾಥ ಮಡಕೆ ಹಾಗೂ ಕಾಂಬಳೆ ಇದ್ದರು. ದುಬಲಗುಂಡಿ: ಇಲ್ಲಿನ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅಂತಪ್ಪ ಜ್ಞಾನ ಗಂಗಾ ಸ್ಮಾರಕ ಕನ್ಯಾ ಪ್ರೌಢಶಾಲೆಯಲ್ಲಿ ಸಂಸ್ಥೆ ಅಧ್ಯಕ್ಷ ಸುಭಾಷ ಗಂಗಾ ಧ್ವಜಾರೋಹಣ ನೆರವೇರಿಸಿದರು. ಐದು ಜನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ, ಶಿಕ್ಷಕರಾದ ಅವಿನಾಶ, ಜಗದೀಶ ಹಾಗೂ ರಾಹುಲ್ ಇದ್ದರು. ಪ್ರಗತಿ ಕೇಂದ್ರ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಪ್ರಗತಿ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.