ಕ್ವಾರಿ ಬಳಿ ಗಣೇಶ ಮಂಡಳಗಳ ಪದಾಧಿಕಾರಿಗಳಿಗಾಗಿ ಟೆಂಟ್ ಹಾಕಲಾಗಿತ್ತು. ಮಹಾ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಗಣೇಶ ಮಹಾ ಮಂಡಳ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಮುಖಂಡರಾದ ಸೂರ್ಯಕಾಂತ ಶೆಟಕಾರ, ವಿಕ್ರಮ ಮುದಾಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಸಿಪಿಐ ಶ್ರೀಕಾಂತ ಅಲ್ಲಾಪುರ, ಹಣಮಂತ ಬುಳ್ಳಾ, ಅಶೋಕ ದಿಡಗೆ, ನರೇಶ ಗೌಳಿ ಮೊದಲಾದವರು ಇದ್ದರು.