ಭಾಲ್ಕಿ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಗಣೇಶ ಪಾಟೀಲ ಪುನರ್ ಆಯ್ಕೆಯಾಗಿದ್ದಾರೆ. ಪಟ್ಟಣದ ಚನ್ನಬಸವಾಶ್ರಮದಲ್ಲಿ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್ ಗಣೇಶ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂಗಮೇಶ ಗುಮ್ಮೆ, ಮಾಳಸಕಾಂತ ವಾಘೆ, ಸುಭಾಷ ಕೆನಡೆ ಅವರಿಗೆ ಆದೇಶ ಪತ್ರ ನೀಡಿದರು.
ದಿಲೀಪ್ ಪಾಟೀಲ, ರೈತ ಘಟಕದ ಸಂದೀಪ ತುಗಾವೆ, ಸಂಜು ಜೈನಾಪುರೆ, ಸಂತೋಷ ಬೆಟ್ಟದ, ದೇವಿದಾಸ ವಾಡೇಕರ, ವಿಶ್ವಜೀತ, ವಿನೋದ, ಸಂಗಮೇಶ, ವಿಶಾಲ ಇದ್ದರು.