ಕಮಲನಗರ: ತಾಲ್ಲೂಕಿನ ಠಾಣಾಕುಶನೂರು ಗ್ರಾಮದ ಭವಾನಿ ಮಂದಿರದಲ್ಲಿ ಘಟ ಸ್ಥಾಪನೆ ಮಾಡಲಾಯಿತು. ಭವಾನಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಿಗ್ಗೆ ಮಾಣಿಕರಾವ ಬಾಳೂರೆ ದಂಪತಿ ಭವಾನಿ ಮಾತೆಗೆ ಅಭಿಷೇಕ ಮಾಡಿಸಿದರು. ಹಸಿರು ಬಳೆ ಮತ್ತು ಸೀರೆ ತೊಡಿಸಲಾಯಿತು. ಅರಿಶಿಣ ಮತ್ತು ಕುಂಕುಮ ಧಾರಣೆ ಮಾಡಿ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.
ಧನರಾಜ ನಾಗಪ್ಪ ಒಡೆಯರ್ ಅವರು ಘಟ ಸ್ಥಾಪನೆ ಕಾರ್ಯ ನೆರವೇರಿಸಿದರು.
ಉಮಾಕಾಂತ ಬಿರಾದಾರ, ರಘುನಾಥ ರೊಟ್ಟೆ, ಗಾಯಬಣ್ಣಾ ಪವಾರ, ಗಿರೀಶ ಒಡೆಯರ್, ಬಾಬುರಾವ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಮಹೇಶ ಒಡೆಯರ್, ಹರೀಶ ಒಡೆಯರ್, ಕಿರಣ ಒಡೆಯರ್, ಬಾಬುರಾವ ವಾಘಮೋಡೆ, ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.