ಈ ಖರೀದಿ ಕೇಂದ್ರದ ಆವರಣ, ಸಹಕಾರ ಸಂಘದ ಉಗ್ರಾಣ ತೊಗರಿ ಚೀಲಗಳಿಂದ ಭರ್ತಿಯಾಗಿದೆ. ತೊಗರಿ ಖರೀದಿ ಕಾರ್ಯ ಮುಂದುವರಿದರೂ ಕಲಬುರ್ಗಿ ಉಗ್ರಾಣಕ್ಕೆ ಸಾಗಿಸಲು ಲಾರಿ ಚಾಲಕರು ಪ್ರತಿ ಲಾರಿಗೆ ₹1ರಿಂದ 2 ಸಾವಿರ ಹಣ ಕೇಳುತ್ತಿದ್ದಾರೆ. ಇಷ್ಟೊಂದು ಹಣ ಯಾರು ಕೊಡಬೇಕು. ನ್ಯಾಪೆಡ್ ಕಂಪನಿಯು ಪ್ರತಿ ಲಾರಿ ಮತ್ತು ಚಾಲಕರು ಹಾಗೂ ಕೂಲಿಕಾರ್ಮಿಕರಿಗೆ ದರ ನಿಗದಿಪಡಿಸಿದ್ದಾರೆ. ಆದರೂ ರೈತರಿಂದ ಹಣ ವಸೂಲಿಗೆ ಮುಂದಾಗಿರುವುದಕ್ಕೆಸಕ್ಕರೆ ಕಾರ್ಖಾನೆ ನಿರ್ದೇಶಕ ಚಂದ್ರಕಾಂತ ಕಡಗಂಚಿ ಆಕ್ರೋಶ ವ್ಯಕ್ತಪಡಿಸಿದರು.