ಬಸವಕಲ್ಯಾಣ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಬುಧವಾರ ಉತ್ತಮ ಮಳೆ ಸುರಿಯಿತು. ಬಿಸಿಲಿನ ದಗೆ ಕಡಿಮೆಯಾಗಿ ತಂಪು ವಾತಾವರಣ ನಿರ್ಮಾಣವಾಯಿತು. ಪಟ್ಟಣದ ರಸ್ತೆಗಳಲ್ಲಿ ನೀರು ಹರಿಯಿತು. ಚರಂಡಿಗಳು ತುಂಬಿದ್ದರಿಂದ ಕೆಲಕಾಲ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕೆಲ ದಿನಗಳ ಹಿಂದೆ ತಾಲ್ಲೂಕಿನ ಅಲ್ಲಲ್ಲಿ ಮಳೆ ಅಗಿತ್ತು. ತಾಲ್ಲೂಕಿನ ಕೆಲ ಭಾಗಗಳಲ್ಲಿ ಈಗಾಗಲೇ ಬಿತ್ತನೆ ಆರಂಭಿಸಲಾಗಿತ್ತು. ಭೂಮಿ ಹಸಿಯಾಗಿದ್ದು, ಗುರುವಾರದಿಂದ ಎಲ್ಲ ಕಡೆ ಬಿತ್ತನೆ ಆರಂಭವಾಗುವ ಸಾಧ್ಯತೆ ಇದೆ.