ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬೀದರ್‌ಗೆ ಗುರುನಾನಕ ಪ್ರಕಾಶ ಯಾತ್ರೆ

Last Updated 5 ಸೆಪ್ಟೆಂಬರ್ 2019, 18:30 IST
ಅಕ್ಷರ ಗಾತ್ರ

ಬೀದರ್: ದೇಶದ 20 ರಾಜ್ಯಗಳಲ್ಲಿ ಮಾನವೀಯ ಮೌಲ್ಯಗಳ ಪ್ರಚಾರ ನಡೆಸಿರುವ ಗುರುನಾನಕ ಪ್ರಕಾಶ ಪುರಬ್ ಯಾತ್ರೆ ಸೆ.7 ರಂದು ನಗರಕ್ಕೆ ಮರಳಲಿದ್ದು, ಗುರುನಾನಕ ಝೀರಾ ಫೌಂಡೇಶನ್ ಸ್ವಾಗತ ಸಮಾರಂಭ ಹಮ್ಮಿಕೊಂಡಿದೆ.

ಗುರುನಾನಕರ 550ನೇ ಜಯಂತಿ ಅಂಗವಾಗಿ ಜೂನ್ 2ರಂದು ಇಲ್ಲಿಯ ಗುರುದ್ವಾರದಿಂದ ಆರಂಭವಾದ ಯಾತ್ರೆಯು ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಡ, ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ, ರಾಜಸ್ತಾನ, ಗುಜರಾತ್, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಮೂಲಕ ಹಾಯ್ದು ತೆಲಂಗಾಣದ ಹೈದರಾಬಾದ್‌ ನಗರವನ್ನು ತಲುಪಿದೆ.

ಹೈದರಾಬಾದ್‌ನ ಅಮಿರಪೇಟ್‌ನಲ್ಲಿ ಗುರುವಾರ ಯಾತ್ರೆಗೆ ಭಕ್ತರು ಸ್ವಾಗತ ನೀಡಿದ್ದು, ಅಲ್ಲಿಂದ ಯಾತ್ರೆ ಬೀದರ್‌ನತ್ತ ಹೊರಟಿದೆ.

ಯಾತ್ರೆಯು ಶನಿವಾರ ಮಧ್ಯಾಹ್ನ 2.30ಕ್ಕೆ ನಗರಕ್ಕೆ ಬರಲಿದೆ. ಕರ್ನಾಟಕ-ತೆಲಂಗಾಣ ಗಡಿಯಲ್ಲಿ ಬೀದರ್-ಹೈದರಾಬಾದ್ ರಸ್ತೆಯಲ್ಲಿ ಯಾತ್ರೆಗೆ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗುವುದು. ಅಲ್ಲಿಂದ ಯಾತ್ರೆಯ ನಗರ ಕೀರ್ತನೆ ನಡೆಯಲಿದೆ. ಭಜನೆ, ಪಲ್ಲಕ್ಕಿ ಕಾರ್ಯಕ್ರಮಗಳು ಆಕರ್ಷಣೆಯಾಗಿರಲಿವೆ ಎಂದು ಗುರುದ್ವಾರ ನಾನಕ ಝೀರಾ ಸಾಹೇಬ ವ್ಯವಸ್ಥಾಪಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT