ಬಸವತತ್ವ ಪ್ರಚಾರ ಮತ್ತು ಪ್ರಸಾರದ ಜತೆಗೆ ಧರ್ಮ ಸಂಘಟನೆಯಲ್ಲಿ ಲಿಂಗೈಕ್ಯೆ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಮತ್ತು ಮಾತೆ ಗಂಗಾದೇವಿ ಅವರ ಕೊಡುಗೆ ದೊಡ್ಡದಿದೆ.
ಬಸವ ಧರ್ಮ ಪೀಠದಿಂದ ಪ್ರಕಟ ಆಗುವ ಬಸವಣ್ಣನವರ ವಚನಗಳಿಗೆ ಕೂಡಲ ಸಂಗಮದೇವ ಎಂಬ ವಚನಾಂಕಿತ ಬಳಸಬೇಕು ಎನ್ನುವುದು ಬಸವ ಭಕ್ತರ ಬಹುದಿನಗಳ ಬೇಡಿಕೆ ಆಗಿತ್ತು. ಹಾಗಾಗಿ, ಇದೊಂದು ಒಳ್ಳೆಯ ಬೆಳವಣಿಗೆ. ಈ ಒಂದು ಹೇಳಿಕೆಯಿಂದ ಧರ್ಮ, ಸಮುದಾಯ ಒಗ್ಗೂಡುವ ಕಾಲ ಸನ್ನಿಹಿತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.