‘ದಿನನಿತ್ಯ ಪಡಿತರ ಪಡೆಯಲು ನೂರಾರು ಜನ ಅಂಗಡಿಗೆ ಬರುತ್ತಾರೆ. ಹೀಗಾಗಿ ಈ ಬಂಗಾರದ ಮಾಂಗಲ್ಯ ಯಾರದೆಂದು ನನಗೆ ಗೊತ್ತಾಗಲಿಲ್ಲ. ಹೀಗಾಗಿ ನಾನು ಪಂಚಾಯಿತಿ ಸದಸ್ಯ ಭೀಮ ಅವರಿಗೆ ತಿಳಿಸಿದೆ. ಅವರು ಗ್ರಾಮದವರಿಗೆ ಸಂಪರ್ಕಿಸಿದಾಗ ಈ ಮಾಂಗಲ್ಯ ಭಾಗ್ಯಶ್ರೀ ಅವರದ್ದು ಎಂದು ತಿಳಿಯಿತು. ನಂತರ ಆ ಮಹಿಳೆಯನ್ನು ಅಂಗಡಿಗೆ ಕರೆಯಿಸಿ ಮಾಂಗಲ್ಯ ನೀಡಿದೆವು’ ಎಂದು ಗುರುನಾಥ ಸ್ವಾಮಿ ಹೇಳಿದರು.