<p><strong>ಬೀದರ್:</strong> ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಮಂಗಳವಾರ ರಾತ್ರಿ ಸುರಿದ ಆಲಿಕಲ್ಲು ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿತು.</p>.<p>ಬೆಳಿಗ್ಗೆಯಿಂದ ಸಂಜೆಯ ತನಕ ಆಕಾಶ ಶುಭ್ರವಾಗಿತ್ತು. ಸಂಜೆ ಏಕಾಏಕಿ ದಟ್ಟ ಮೋಡ ಆವರಿಸಿಕೊಂಡು ಜೋರು ಗಾಳಿ ಬೀಸಲಾರಂಭಿಸಿತು. ಬಳಿಕ ಆಕಾಶದಲ್ಲಿ ಮಿಂಚು ಕಾಣಿಸಿಕೊಂಡಿತು. ತುಂತುರು ಹನಿಗಳೊಂದಿಗೆ ಆರಂಭಗೊಂಡ ಆಲಿಕಲ್ಲುಗಳೊಂದಿಗೆ ಸುರಿಯಲು ಶುರು ಮಾಡಿತು.</p>.<p>ಪಟಪಟನೇ ಜೋರಾಗಿ ಆಲಿಕಲ್ಲುಗಳು ನೆಲಕ್ಕೆ ಅಪ್ಪಳಿಸಲು ಶುರು ಮಾಡುತ್ತಿದ್ದಂತೆ ಪಾದಚಾರಿಗಳು ರಸ್ತೆಯಿಂದ ಕಾಲ್ಕಿತ್ತು ಕಟ್ಟಡಗಳ ಅಡಿ ಆಶ್ರಯ ಪಡೆದರು. ಬಳಿಕ ಬೈಕ್ ಸವಾರರು ಹೀಗೆ ಮಾಡಿದರು. ಇತರೆ ವಾಹನಗಳವರು ಕೂಡ ರಸ್ತೆಬದಿ ನಿಂತರು. ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಅಷ್ಟರಮಟ್ಟಿಗೆ ಆಲಿಕಲ್ಲು ಮಳೆ ಜೋರಾಗಿ ಸುರಿಯಿತು.</p>.<p>ಸಂಜೆ 7.15 ಸುಮಾರಿಗೆ ಆರಂಭಗೊಂಡ ಮಳೆ ರಾತ್ರಿ 9.15ರ ನಂತರವೂ ಮುಂದುವರೆದಿತ್ತು. ಜೋರು ಮಳೆಯಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಎಲ್ಲೆಡೆ ಅಂಧಕಾರ ಆವರಿಸಿಕೊಂಡಿತು. ಪ್ರಮುಖ ರಸ್ತೆಗಳಲೆಲ್ಲ ನೀರು ಹೊಳೆಯಂತೆ ಹರಿಯಿತು. ತಾಲ್ಲೂಕಿನ ಚಿಟ್ಟಾ, ಘೋಡಂಪಳ್ಳಿ, ಗೋರನಳ್ಳಿ, ಗುನ್ನಳ್ಳಿ, ಅಮಲಾಪುರ, ಯಾಕತಪುರ, ಕಮಠಾಣ, ಬೆಳ್ಳೂರಾ ಸೇರಿದಂತೆ ಹಲವೆಡೆ ಜೋರು ಮಳೆಯಾಗಿರುವುದು ವರದಿಯಾಗಿದೆ.</p>.<h2> ಹಬ್ಬದ ಖರೀದಿಗೆ ತೊಡಕು</h2><p> ರಂಜಾನ್ ಮಾಸದ ಉಪವಾಸ ವ್ರತ ಆಚರಿಸುತ್ತಿರುವ ಮುಸ್ಲಿಮರ ಪವಿತ್ರ ಹಬ್ಬ ಈದ್ ಉಲ್ ಫಿತ್ರಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದಕಾರಣ ತಡರಾತ್ರಿ 2 ಗಂಟೆಯ ವರೆಗೆ ಓಲ್ಡ್ ಸಿಟಿಯಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಹಗಲಿನಲ್ಲಿ ಬಿಸಿಲು ಹೆಚ್ಚಿರುವುದರಿಂದ ಉಪವಾಸ ನಿರತರಿಗೆ ಕಷ್ಟವಾಗುತ್ತದೆ ಎಂದು ಪ್ರತಿ ಸಲ ಈ ರೀತಿ ಮಾಡಲಾಗುತ್ತದೆ. ಆದರೆ ಕಳೆದ ಮೂರು ದಿನಗಳಿಂದ ಸಂಜೆಯಿಂದ ರಾತ್ರಿ ತನಕ ಮಳೆ ಸುರಿಯುತ್ತಿರುವ ಕಾರಣ ಮುಸ್ಲಿಮರಿಗೆ ಹಬ್ಬದ ಖರೀದಿಗೆ ತೊಡಕಾಗಿದೆ. ಜೊತೆಗೆ ವಿವಿಧೆಡೆಗಳಿಂದ ಮಾರಾಟಕ್ಕೆ ವಸ್ತುಗಳನ್ನು ತಂದಿರುವ ವ್ಯಾಪಾರಿಗಳಿಗೂ ನಷ್ಟ ಉಂಟಾಗುತ್ತಿದೆ. ಮಾರಾಟಕ್ಕಿಟ್ಟಿದ್ದ ವಸ್ತುಗಳು ಹಣ್ಣುಗಳು ತೊಯ್ದು ತೊಪ್ಪೆಯಾಗಿವೆ. ಮಳೆಯಿಂದಾಗಿ ಜನ ಖರೀದಿಗೆ ಹೊರಬರಲಿಲ್ಲ. ಹಬ್ಬಕ್ಕೆ ಮೂರ್ನಾಲ್ಕೇ ದಿನಗಳು ಬಾಕಿ ಉಳಿದಿದೆ. ಆದರೆ ಮಾ. 20ರ ವರೆಗೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಮಂಗಳವಾರ ರಾತ್ರಿ ಸುರಿದ ಆಲಿಕಲ್ಲು ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿತು.</p>.<p>ಬೆಳಿಗ್ಗೆಯಿಂದ ಸಂಜೆಯ ತನಕ ಆಕಾಶ ಶುಭ್ರವಾಗಿತ್ತು. ಸಂಜೆ ಏಕಾಏಕಿ ದಟ್ಟ ಮೋಡ ಆವರಿಸಿಕೊಂಡು ಜೋರು ಗಾಳಿ ಬೀಸಲಾರಂಭಿಸಿತು. ಬಳಿಕ ಆಕಾಶದಲ್ಲಿ ಮಿಂಚು ಕಾಣಿಸಿಕೊಂಡಿತು. ತುಂತುರು ಹನಿಗಳೊಂದಿಗೆ ಆರಂಭಗೊಂಡ ಆಲಿಕಲ್ಲುಗಳೊಂದಿಗೆ ಸುರಿಯಲು ಶುರು ಮಾಡಿತು.</p>.<p>ಪಟಪಟನೇ ಜೋರಾಗಿ ಆಲಿಕಲ್ಲುಗಳು ನೆಲಕ್ಕೆ ಅಪ್ಪಳಿಸಲು ಶುರು ಮಾಡುತ್ತಿದ್ದಂತೆ ಪಾದಚಾರಿಗಳು ರಸ್ತೆಯಿಂದ ಕಾಲ್ಕಿತ್ತು ಕಟ್ಟಡಗಳ ಅಡಿ ಆಶ್ರಯ ಪಡೆದರು. ಬಳಿಕ ಬೈಕ್ ಸವಾರರು ಹೀಗೆ ಮಾಡಿದರು. ಇತರೆ ವಾಹನಗಳವರು ಕೂಡ ರಸ್ತೆಬದಿ ನಿಂತರು. ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಅಷ್ಟರಮಟ್ಟಿಗೆ ಆಲಿಕಲ್ಲು ಮಳೆ ಜೋರಾಗಿ ಸುರಿಯಿತು.</p>.<p>ಸಂಜೆ 7.15 ಸುಮಾರಿಗೆ ಆರಂಭಗೊಂಡ ಮಳೆ ರಾತ್ರಿ 9.15ರ ನಂತರವೂ ಮುಂದುವರೆದಿತ್ತು. ಜೋರು ಮಳೆಯಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಎಲ್ಲೆಡೆ ಅಂಧಕಾರ ಆವರಿಸಿಕೊಂಡಿತು. ಪ್ರಮುಖ ರಸ್ತೆಗಳಲೆಲ್ಲ ನೀರು ಹೊಳೆಯಂತೆ ಹರಿಯಿತು. ತಾಲ್ಲೂಕಿನ ಚಿಟ್ಟಾ, ಘೋಡಂಪಳ್ಳಿ, ಗೋರನಳ್ಳಿ, ಗುನ್ನಳ್ಳಿ, ಅಮಲಾಪುರ, ಯಾಕತಪುರ, ಕಮಠಾಣ, ಬೆಳ್ಳೂರಾ ಸೇರಿದಂತೆ ಹಲವೆಡೆ ಜೋರು ಮಳೆಯಾಗಿರುವುದು ವರದಿಯಾಗಿದೆ.</p>.<h2> ಹಬ್ಬದ ಖರೀದಿಗೆ ತೊಡಕು</h2><p> ರಂಜಾನ್ ಮಾಸದ ಉಪವಾಸ ವ್ರತ ಆಚರಿಸುತ್ತಿರುವ ಮುಸ್ಲಿಮರ ಪವಿತ್ರ ಹಬ್ಬ ಈದ್ ಉಲ್ ಫಿತ್ರಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದಕಾರಣ ತಡರಾತ್ರಿ 2 ಗಂಟೆಯ ವರೆಗೆ ಓಲ್ಡ್ ಸಿಟಿಯಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಹಗಲಿನಲ್ಲಿ ಬಿಸಿಲು ಹೆಚ್ಚಿರುವುದರಿಂದ ಉಪವಾಸ ನಿರತರಿಗೆ ಕಷ್ಟವಾಗುತ್ತದೆ ಎಂದು ಪ್ರತಿ ಸಲ ಈ ರೀತಿ ಮಾಡಲಾಗುತ್ತದೆ. ಆದರೆ ಕಳೆದ ಮೂರು ದಿನಗಳಿಂದ ಸಂಜೆಯಿಂದ ರಾತ್ರಿ ತನಕ ಮಳೆ ಸುರಿಯುತ್ತಿರುವ ಕಾರಣ ಮುಸ್ಲಿಮರಿಗೆ ಹಬ್ಬದ ಖರೀದಿಗೆ ತೊಡಕಾಗಿದೆ. ಜೊತೆಗೆ ವಿವಿಧೆಡೆಗಳಿಂದ ಮಾರಾಟಕ್ಕೆ ವಸ್ತುಗಳನ್ನು ತಂದಿರುವ ವ್ಯಾಪಾರಿಗಳಿಗೂ ನಷ್ಟ ಉಂಟಾಗುತ್ತಿದೆ. ಮಾರಾಟಕ್ಕಿಟ್ಟಿದ್ದ ವಸ್ತುಗಳು ಹಣ್ಣುಗಳು ತೊಯ್ದು ತೊಪ್ಪೆಯಾಗಿವೆ. ಮಳೆಯಿಂದಾಗಿ ಜನ ಖರೀದಿಗೆ ಹೊರಬರಲಿಲ್ಲ. ಹಬ್ಬಕ್ಕೆ ಮೂರ್ನಾಲ್ಕೇ ದಿನಗಳು ಬಾಕಿ ಉಳಿದಿದೆ. ಆದರೆ ಮಾ. 20ರ ವರೆಗೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>