<p><strong>ಬೀದರ್:</strong> ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಬಿರುಸಿನ ಮಳೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಯಿತು.</p>.<p>ಸಂಜೆ ಆರು ಗಂಟೆಗೆ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಆರ್ಭಟ ಶುರುವಾಯಿತು. ಬಳಿಕ ತುಂತುರು ಹನಿಗಳು ಉದುರಲಾರಂಭಿಸಿದವು. ಆನಂತರ ಮಳೆ ಉಗ್ರ ಸ್ವರೂಪ ಪಡೆಯಿತು. 7.30ರ ಸುಮಾರಿಗೆ ಆರಂಭಗೊಂಡ ಜೋರು ಮಳೆ ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಸುರಿಯಿತು.</p>.<p>ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳೆಲೆಲ್ಲಾ ಅಪಾರ ಪ್ರಮಾಣದ ನೀರು ಹರಿಯಿತು. ಮತ್ತೊಮ್ಮೆ ಚರಂಡಿ ಅವ್ಯವಸ್ಥೆ ಬಯಲಾಯಿತು. ಮಳೆ ನೀರು ಚರಂಡಿಯಲ್ಲಿ ಹರಿಯುವ ಬದಲು ರಸ್ತೆ ಮೇಲೆ ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರ ದುಸ್ತರವಾಯಿತು. ನಗರದ ಬೊಮ್ಮಗೊಂಡೇಶ್ವರ ವೃತ್ತ, ಹಾರೂರಗೇರಿ ಕಮಾನ್, ಬಸವನಗರ, ಮೈಲೂರ ಕ್ರಾಸ್, ಮನ್ನಳ್ಳಿ ರಸ್ತೆ, ಚಿದಂಬರಾಶ್ರಮ, ಮೋಹನ್ ಮಾರ್ಕೆಟ್, ಓಲ್ಡ್ ಸಿಟಿ ಸೇರಿದಂತೆ ಹಲವೆಡೆ ಅಪಾರ ಪ್ರಮಾಣದ ನೀರು ಜಮಾವಣೆಗೊಂಡಿದ್ದರಿಂದ ಜನ ಸಮಸ್ಯೆ ಅನುಭವಿಸಿದರು. ರಾತ್ರಿ ಹತ್ತು ಗಂಟೆಯ ನಂತರವೂ ಮಳೆ ಮುಂದುವರೆದಿತ್ತು.</p>.<p>ಬೀದರ್ ತಾಲ್ಲೂಕಿನ ಚಿಟ್ಟಾ, ಅಮಲಾಪುರ, ಯದಲಾಪುರ, ಯಾಕತಪುರ, ಘೋಡಂಪಳ್ಳಿ, ಗುನ್ನಳ್ಳಿ, ಮಲ್ಕಾಪುರ, ಅಷ್ಟೂರ್ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಜಿಲ್ಲೆಯ ಭಾಲ್ಕಿ, ಹುಲಸೂರ, ಕಮಲನಗರ, ಔರಾದ್, ಚಿಟಗುಪ್ಪದಲ್ಲೂ ಮಳೆಯಾಗಿರುವುದು ವರದಿಯಾಗಿದೆ.</p>.<p>ರೈತರು ಜೋಳ ರಾಶಿಗೆ ಸಿದ್ಧತೆ ನಡೆಸಿ, ಬೆಳೆ ಕಟಾವು ಮಾಡಿ ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಆದರೆ, ಮಳೆಯಿಂದ ಜೋಳ ತೊಯ್ದು ಹೋಗಿದೆ. ಜಿಲ್ಲೆಯಾದ್ಯಂತ ಇನ್ನೂ ಎರಡ್ಮೂರು ದಿನಗಳ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಬಿರುಸಿನ ಮಳೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಯಿತು.</p>.<p>ಸಂಜೆ ಆರು ಗಂಟೆಗೆ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಆರ್ಭಟ ಶುರುವಾಯಿತು. ಬಳಿಕ ತುಂತುರು ಹನಿಗಳು ಉದುರಲಾರಂಭಿಸಿದವು. ಆನಂತರ ಮಳೆ ಉಗ್ರ ಸ್ವರೂಪ ಪಡೆಯಿತು. 7.30ರ ಸುಮಾರಿಗೆ ಆರಂಭಗೊಂಡ ಜೋರು ಮಳೆ ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಸುರಿಯಿತು.</p>.<p>ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳೆಲೆಲ್ಲಾ ಅಪಾರ ಪ್ರಮಾಣದ ನೀರು ಹರಿಯಿತು. ಮತ್ತೊಮ್ಮೆ ಚರಂಡಿ ಅವ್ಯವಸ್ಥೆ ಬಯಲಾಯಿತು. ಮಳೆ ನೀರು ಚರಂಡಿಯಲ್ಲಿ ಹರಿಯುವ ಬದಲು ರಸ್ತೆ ಮೇಲೆ ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರ ದುಸ್ತರವಾಯಿತು. ನಗರದ ಬೊಮ್ಮಗೊಂಡೇಶ್ವರ ವೃತ್ತ, ಹಾರೂರಗೇರಿ ಕಮಾನ್, ಬಸವನಗರ, ಮೈಲೂರ ಕ್ರಾಸ್, ಮನ್ನಳ್ಳಿ ರಸ್ತೆ, ಚಿದಂಬರಾಶ್ರಮ, ಮೋಹನ್ ಮಾರ್ಕೆಟ್, ಓಲ್ಡ್ ಸಿಟಿ ಸೇರಿದಂತೆ ಹಲವೆಡೆ ಅಪಾರ ಪ್ರಮಾಣದ ನೀರು ಜಮಾವಣೆಗೊಂಡಿದ್ದರಿಂದ ಜನ ಸಮಸ್ಯೆ ಅನುಭವಿಸಿದರು. ರಾತ್ರಿ ಹತ್ತು ಗಂಟೆಯ ನಂತರವೂ ಮಳೆ ಮುಂದುವರೆದಿತ್ತು.</p>.<p>ಬೀದರ್ ತಾಲ್ಲೂಕಿನ ಚಿಟ್ಟಾ, ಅಮಲಾಪುರ, ಯದಲಾಪುರ, ಯಾಕತಪುರ, ಘೋಡಂಪಳ್ಳಿ, ಗುನ್ನಳ್ಳಿ, ಮಲ್ಕಾಪುರ, ಅಷ್ಟೂರ್ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಜಿಲ್ಲೆಯ ಭಾಲ್ಕಿ, ಹುಲಸೂರ, ಕಮಲನಗರ, ಔರಾದ್, ಚಿಟಗುಪ್ಪದಲ್ಲೂ ಮಳೆಯಾಗಿರುವುದು ವರದಿಯಾಗಿದೆ.</p>.<p>ರೈತರು ಜೋಳ ರಾಶಿಗೆ ಸಿದ್ಧತೆ ನಡೆಸಿ, ಬೆಳೆ ಕಟಾವು ಮಾಡಿ ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಆದರೆ, ಮಳೆಯಿಂದ ಜೋಳ ತೊಯ್ದು ಹೋಗಿದೆ. ಜಿಲ್ಲೆಯಾದ್ಯಂತ ಇನ್ನೂ ಎರಡ್ಮೂರು ದಿನಗಳ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>