ಗಂಡೂರಿ ನಾಲಾ ತುಂಬಿ ಹರಿದಿದ್ದ ರಿಂದ ಖೇರ್ಡಾ (ಕೆ), ಕೊಹಿನೂರ ವಾಡಿ, ಶಿರಗಾಪುರ ಗ್ರಾಮಗಳ ವ್ಯಾಪ್ತಿಯ ಹೊಲಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಆಲಗೂಡ ನಾಲೆಯ ನೀರು ಉಕ್ಕಿ ಅನೇಕರ ಜಮೀನುಗಳನ್ನು ಹಾಳು ಮಾಡಿದೆ. ಉದ್ದು, ಹೆಸರು, ಸೋಯಾಬಿನ ನೀರಿನೊಂದಿಗೆ ಹರಿದುಕೊಂಡು ಹೋಗಿದೆ ಎಂದು ಮಾರುತಿ ಹೇಳಿದ್ದಾರೆ.