<p><strong>ಬೀದರ್:</strong> ನಗರದ ಗಾಂಧಿ ಗಂಜ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 15 ಬೈಕ್ಗಳ ಸಮೇತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.|</p>.<p>ಇಲ್ಲಿನ ವಿದ್ಯಾ ನಗರದ ನಿವಾಸಿ ವಿಷ್ಣು ರಮೇಶ್ (25) ಬಂಧಿತ. 15 ಬೈಕ್ಗಳ ಒಟ್ಟು ಮೌಲ್ಯ ₹9.78 ಲಕ್ಷ ಎಂದು ಅಂದಾಜಿಸಲಾಗಿದೆ. ಜಪ್ತಿ ಮಾಡಿಕೊಂಡ ಎಲ್ಲ ಬೈಕ್ಗಳು ಹೀರೋ ಸ್ಪ್ಲೆಂಡರ್ ಪ್ಲಸ್ ಕಂಪನಿಗೆ ಸೇರಿವೆ. ಆರೋಪಿ ಈ ಕಂಪನಿಯ ಬೈಕ್ಗಳನ್ನಷ್ಟೇ ಕದಿಯುವುದನ್ನು ಚಾಳಿ ಮಾಡಿಕೊಂಡಿದ್ದ. ಬೈಕ್ ಕಳ್ಳತನ ಬಿಟ್ಟರೆ ಇತರೆ ಯಾವುದೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮಾರ್ಚ್ 19ರಂದು ಭಾಲ್ಕಿ ತಾಲ್ಲೂಕಿನ ಗಣೇಶಪೂರವಾಡಿಯ ಗಣಪತಿ ಗಂಗಾಜಿ ಅವರು ಬೀದರ್ನ ಗಾಂಧಿ ಗಂಜ್ ಎಪಿಎಂಸಿ ಮಾರ್ಕೆಟ್ನಲ್ಲಿ ಬೈಕ್ ನಿಲ್ಲಿಸಿ, ಬೀಜ ಖರೀದಿಗೆ ತೆರಳಿದ್ದರು. ವಾಪಸ್ ಬಂದಾಗ ಅವರ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಅವರು ಗಾಂಧಿಗಂಜ್ ಠಾಣೆಗೆ ದೂರು ಕೊಟ್ಟಿದ್ದರು. ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಹಾಗೂ ಕಮಾಂಡ್ ಕಂಟ್ರೋಲ್ ರೂಮ್ ಸಹಾಯದಿಂದ ಆರೋಪಿಯನ್ನು ಅದೇ ದಿನ ಬಂಧಿಸಲಾಗಿದೆ. </p>.<p>ಬೀದರ್ನಲ್ಲಿ 14 ಬೈಕ್ಗಳು, ಹುಮನಾಬಾದ್ನಲ್ಲಿ 1 ಬೈಕ್ ಕಳವು ಮಾಡಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.</p>.<p>ಗಾಂಧಿ ಗಂಜ್ ಠಾಣೆ ಪಿಐ ಆನಂದರಾವ್ ಎಸ್.ಎನ್, ಪಿಎಸ್ಐ ವಿದ್ಯಾವಾನ್, ಅಪರಾಧ ವಿಭಾಗದ ಸಿಬ್ಬಂದಿ ನವೀನ್, ಅನಿಲ್, ಇರ್ಫಾನ್, ಗಂಗಾಧರ್, ಸುಧಾಕರ್, ಹರ್ಷವರ್ಧನ್, ತುಕ್ಕಾರೆಡ್ಡಿ ಹಾಗೂ ಸಂಚಾರ ಪೊಲೀಸರ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರದ ಗಾಂಧಿ ಗಂಜ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 15 ಬೈಕ್ಗಳ ಸಮೇತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.|</p>.<p>ಇಲ್ಲಿನ ವಿದ್ಯಾ ನಗರದ ನಿವಾಸಿ ವಿಷ್ಣು ರಮೇಶ್ (25) ಬಂಧಿತ. 15 ಬೈಕ್ಗಳ ಒಟ್ಟು ಮೌಲ್ಯ ₹9.78 ಲಕ್ಷ ಎಂದು ಅಂದಾಜಿಸಲಾಗಿದೆ. ಜಪ್ತಿ ಮಾಡಿಕೊಂಡ ಎಲ್ಲ ಬೈಕ್ಗಳು ಹೀರೋ ಸ್ಪ್ಲೆಂಡರ್ ಪ್ಲಸ್ ಕಂಪನಿಗೆ ಸೇರಿವೆ. ಆರೋಪಿ ಈ ಕಂಪನಿಯ ಬೈಕ್ಗಳನ್ನಷ್ಟೇ ಕದಿಯುವುದನ್ನು ಚಾಳಿ ಮಾಡಿಕೊಂಡಿದ್ದ. ಬೈಕ್ ಕಳ್ಳತನ ಬಿಟ್ಟರೆ ಇತರೆ ಯಾವುದೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮಾರ್ಚ್ 19ರಂದು ಭಾಲ್ಕಿ ತಾಲ್ಲೂಕಿನ ಗಣೇಶಪೂರವಾಡಿಯ ಗಣಪತಿ ಗಂಗಾಜಿ ಅವರು ಬೀದರ್ನ ಗಾಂಧಿ ಗಂಜ್ ಎಪಿಎಂಸಿ ಮಾರ್ಕೆಟ್ನಲ್ಲಿ ಬೈಕ್ ನಿಲ್ಲಿಸಿ, ಬೀಜ ಖರೀದಿಗೆ ತೆರಳಿದ್ದರು. ವಾಪಸ್ ಬಂದಾಗ ಅವರ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಅವರು ಗಾಂಧಿಗಂಜ್ ಠಾಣೆಗೆ ದೂರು ಕೊಟ್ಟಿದ್ದರು. ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಹಾಗೂ ಕಮಾಂಡ್ ಕಂಟ್ರೋಲ್ ರೂಮ್ ಸಹಾಯದಿಂದ ಆರೋಪಿಯನ್ನು ಅದೇ ದಿನ ಬಂಧಿಸಲಾಗಿದೆ. </p>.<p>ಬೀದರ್ನಲ್ಲಿ 14 ಬೈಕ್ಗಳು, ಹುಮನಾಬಾದ್ನಲ್ಲಿ 1 ಬೈಕ್ ಕಳವು ಮಾಡಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.</p>.<p>ಗಾಂಧಿ ಗಂಜ್ ಠಾಣೆ ಪಿಐ ಆನಂದರಾವ್ ಎಸ್.ಎನ್, ಪಿಎಸ್ಐ ವಿದ್ಯಾವಾನ್, ಅಪರಾಧ ವಿಭಾಗದ ಸಿಬ್ಬಂದಿ ನವೀನ್, ಅನಿಲ್, ಇರ್ಫಾನ್, ಗಂಗಾಧರ್, ಸುಧಾಕರ್, ಹರ್ಷವರ್ಧನ್, ತುಕ್ಕಾರೆಡ್ಡಿ ಹಾಗೂ ಸಂಚಾರ ಪೊಲೀಸರ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>