ವಾರದಿಂದ ಉಡುಪಿ ತಾಲ್ಲೂಕಿನ ಉದ್ಯಾವರ, ಬೋಳಾರ್ಗುಡ್ಡೆ, ಪಿತ್ರೋಡಿ, ಬೊಳ್ಜೆ ಪ್ರದೇಶಗಳಲ್ಲಿ ಕರೆಂಟ್ ಕೈಕೊಟ್ಟಿತ್ತು. ಇದರಿಂದ ಜನರು ಕಂಗಾಲಾಗಿದ್ದರು. ಮೆಸ್ಕಾಂ ಇಲಾಖೆ ಸರಿಪಡಿಸದೆ ಇರುವ ಕಾರಣದಿಂದ ಜನರು ಪರದಾಡಿದ್ದರು. ಮೆಸ್ಕಾಂ ಜತೆಗೆ ಉದ್ಯಾವರ ಬೊಳ್ಜೆಯ ಗ್ರಾಮಸ್ಥರೂ ಕೈಜೋಡಿಸಿದ ಪರಿಣಾಮ ವಿದ್ಯುತ್ ಭಾಗ್ಯ ಕಾಣುವಂತಾಗಿದೆ.