ಬೀದರ್: ಭಾರತದಲ್ಲಿ ಒಟ್ಟು ಜನಸಂಖ್ಯೆಯ ಬಹುಸಂಖ್ಯೆಯ ಜನರು ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಹಿಂದಿ ಹೃದಯಕ್ಕೆ ಹತ್ತಿರವಾದ ಭಾಷೆಯಾಗಿದೆ ಎಂದು ಭಾಲ್ಕಿ ಚನ್ನಬಸವೇಶ್ವರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ರಂಜನಾ ಪಾಟೀಲ ಹೇಳಿದರು.
ನಗರದ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ವತಿಯಿಂದ ಹಮ್ಮಿಕೊಂಡ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ಮಾತನಾಡಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಗೀತಾ ಪೋಸ್ತೆ ಮಾತನಾಡಿದರು.
ಹಿಂದಿ ಘೋಷವಾಕ್ಯ ಲೇಖನ ಸ್ಪರ್ಧೆಯಲ್ಲಿ ವಿಜೇತ ಶಿವಾನಿ ಜಾಧವ (ಪ್ರಥಮ), ನಿಶಿತಾ (ದ್ವಿತೀಯ), ಸಾಕ್ಷಿ ಬಿ.ಕಾಂ (ತೃತೀಯ), ಪವನ ಬಿ.ಎ. (ಸಮಾಧಾನಕರ) ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರಾಚಾರ್ಯ ಎಂ.ಎಸ್.ಚೆಲ್ವಾ ಇದ್ದರು.
ವಿದ್ಯಾರ್ಥಿ ಶಾರಿಫ್ ನಿರೂಪಿಸಿದರು. ಕಲಾ ವಿಭಾಗದ ಮುಖ್ಯಸ್ಥ ಬಸವರಾಜ ಕೊಡಂಬಲ್ ಸ್ವಾಗತಿಸಿದರು. ಸಿರಾಜೊದ್ದಿನ್ ವಂದಿಸಿದರು.