‘ದೇವೇಗೌಡರು ಕ್ಷೇಮವಾಗಿದ್ದಾರೆಯೇ? ಹೌ ಈಸ್ ಮೈ ಬೆಸ್ಟ್ ಫ್ರೆಂಡ್ (ಕುಮಾರಸ್ವಾಮಿ)’ ಎಂದು ಮೋದಿ ಅವರು ಬಂಡೆಪ್ಪ ಅವರಲ್ಲಿ ವಿಚಾರಿಸಿದರು. ‘ಇಬ್ಬರೂ ಕ್ಷೇಮವಾಗಿದ್ದಾರೆ’ ಎಂದು ಬಂಡೆಪ್ಪ ಉತ್ತರಿಸಿದರು.
ನಂತರ ಸಚಿವರಾದ ರಾಜಶೇಖರ ಪಾಟೀಲ, ರಹೀಂ ಖಾನ್, ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವಾಣ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.