ಹಸ್ತ ದಿಗಂಬರ ಕರಿ ಬಸವೇಶ್ವರರು ತಮ್ಮ ಜೀವನದುದ್ದಕ್ಕೂ ಅನೇಕ ಪವಾಡಗಳನ್ನು ಮಾಡಿದ್ದರು ಎಂಬುದು ಇಲ್ಲಿನವರ ಹೇಳಿಕೆ. ಅವರ ಶಿಷ್ಯರಾದ ಶರಣ ಮಡಿವಾಳಪ್ಪ ಹಾಗೂ ಶರಣೆ ಯಂಕಮ್ಮಾ ತಾಯಿಯವರು ಹೆಸರು ವಾಸಿಯಾಗಿದ್ದಾರೆ. ಕರಿ ಬಸವೇಶ್ವರರು ಸಿದ್ಧ ಹಸ್ತವುಳ್ಳವರು. ಹೀಗಾಗಿ ಅಪಾರ ಭಕ್ತರನ್ನು ಹೊಂದಿದ್ದು, ದೇವಸ್ಥಾನಕ್ಕೆ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರು ಭೇಟಿ ನೀಡಿ, ದರ್ಶನ ಪಡೆಯುತ್ತಾರೆ.