<p><strong>ಹುಲಸೂರ:</strong> ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲೇ ತಾತ್ಕಾಲಿಕವಾಗಿ ತಂಗಿ ಬದುಕು ಸಾಗಿಸುತ್ತಿರುವ ಬಯಲು ಕಮ್ಮಾರರ ಜೀವನ ಇನ್ನೂ ಅನಿಶ್ಚಿತತೆಯಲ್ಲೇ ಮುಂದುವರಿದಿದೆ. ಬಿಸಿಲು, ಚಳಿ, ಗಾಳಿ ಎನ್ನದೆ ದಿನವಿಡೀ ಕಬ್ಬಿಣದ ಕಾಯಕದಲ್ಲಿ ತೊಡಗಿರುವ ಈ ಶ್ರಮಜೀವಿಗಳು, ರೈತರಿಗೆ ಅಗತ್ಯ ಕೃಷಿ ಉಪಕರಣಗಳನ್ನು ತಯಾರಿಸಿ ಕೊಡುವ ಮೂಲಕ ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.</p>.<p>ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುವ ಕಮ್ಮಾರರು, ಒಂದೇ ಸ್ಥಳದಲ್ಲಿ ಎರಡು–ಮೂರು ದಿನಗಳವರೆಗೆ ತಂಗಿ ಕುಡುಗೋಲು, ಕೊಡಲಿ, ಗುದ್ದಲಿ, ಕುರುಪಿ, ಕೊಯ್ತಾ, ಹಾರೆ, ಕುಳ ಹಾಗೂ ಇತರೆ ಕೃಷಿ ಉಪಕರಣಗಳನ್ನು ತಯಾರಿಸುತ್ತಾರೆ. ಕಡಿಮೆ ವೆಚ್ಚ, ಕಡಿಮೆ ಸಮಯದಲ್ಲಿ ಉಪಕರಣಗಳು ಸಿಗುವುದರಿಂದ ರೈತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.</p>.<p>ಬೇಡಿಕೆಯ ಅನುಸಾರ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸುತ್ತಲೇ ಜೀವನ ಸಾಗಿಸುವ ಈ ಕುಟುಂಬಗಳಲ್ಲಿ ಗಂಡು–ಹೆಣ್ಣು ಭೇದವಿಲ್ಲ. ಎಲ್ಲರೂ ಶ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಬಯಲಲ್ಲೇ ಕುಲುಮೆ ಹಚ್ಚಿ ಕಬ್ಬಿಣ ಕಾಯಿಸುವ ಪತಿ, ಅದನ್ನು ಸುತ್ತಿಗೆಯಿಂದ ಬಡಿದು ಆಕಾರ ನೀಡುವ ಪತ್ನಿ..ಹೀಗೆ ಕುಟುಂಬದ ಸಮೂಹ ಶ್ರಮದಿಂದ ಉಪಕರಣಗಳು ಸಿದ್ಧವಾಗುತ್ತವೆ. ಒಂದು ಉಪಕರಣ ತಯಾರಿಸಲು ಸರಾಸರಿ 15 ರಿಂದ 30 ನಿಮಿಷಗಳವರೆಗೆ ಬೇಕಾಗುತ್ತದೆ.</p>.<p>‘ನಾವು ದಿನಪೂರ್ತಿ ದುಡಿದರೆ ಮಾತ್ರ ಜೀವನ ಸಾಗುತ್ತದೆ. ಒಂದೇ ಸ್ಥಳದಲ್ಲಿ ನೆಲೆಸಲು ಸಾಧ್ಯವಿಲ್ಲ. ಮಕ್ಕಳನ್ನು ಶಿಕ್ಷಣಕ್ಕಾಗಿ ಊರಲ್ಲೇ ಬಿಟ್ಟು ಬಂದಿದ್ದೇವೆ. ಸರ್ಕಾರ ಮನೆ ಹಾಗೂ ಸಾಲ ಸೌಲಭ್ಯ ನೀಡಿದರೆ ಬದುಕಿಗೆ ಸ್ಥಿರತೆ ಬರುತ್ತದೆ’ ಎನ್ನುತ್ತಾರೆ ಕಮ್ಮಾರರು.</p>.<p>‘ನಮ್ಮ ಮನೆತನದಲ್ಲಿ ತಲತಲಾಂತರಗಳಿಂದ ಬಂದಿರುವ ಕಸುಬು. ಇದೇ ನಮ್ಮ ಜೀವನಕ್ಕೆ ಆಧಾರ. ಇದನ್ನು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ’ ಎಂದು ಕಮ್ಮಾರ ಲೋಕೇಶ ಹೇಳಿದರು.</p>.<p>‘ಮುಂಗಾರು ಹಂಗಾಮಿನಲ್ಲಿ ಹಳ್ಳಿಗಳಲ್ಲಿ ಬೀಡು ಬಿಟ್ಟು ರೈತಾಪಿ ಸಾಮಗ್ರಿಗಳನ್ನು ತಯಾರಿಸಿ ಮಾರುತ್ತೇವೆ. ಹಣವಾಗಲಿ, ಧಾನ್ಯವಾಗಲಿ ಪಡೆದು ಮುಂದಿನ ಹಳ್ಳಿಗೆ ತೆರಳುತ್ತೇವೆ’ ಎಂದು ತಾಲ್ಲೂಕಿನ ಗಂಗಮ್ಮನಹಳ್ಳಿಯಲ್ಲಿ ತಂಗಿದ್ದ ಅಖಿಲೇಶ ಹೇಳಿದರು.</p>.<p>ವಾಸಸ್ಥಳವಿಲ್ಲದೆ ರಸ್ತೆ ಬದಿಯಲ್ಲೇ ತಂಗುವುದು, ಶುದ್ಧ ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೌಲಭ್ಯಗಳ ಕೊರತೆ ಇವರ ಬದುಕನ್ನು ಇನ್ನಷ್ಟು ಕಷ್ಟಕರಗೊಳಿಸಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸುವ ಈ ಶ್ರಮಜೀವಿಗಳು ಇನ್ನೂ ಸರ್ಕಾರದ ಯೋಜನೆಗಳ ಅಂಚಿನಲ್ಲೇ ಉಳಿದಿರುವುದು ವಿಷಾದಕರ ಸಂಗತಿಯಾಗಿದೆ.</p>.<p>ತಹಶೀಲ್ದಾರ್ ಶಿವಾನಂದ ಮೇತ್ರೆ ಪ್ರತಿಕ್ರಿಯಿಸಿ, ‘ತಾಲ್ಲೂಕಿನಲ್ಲಿ ಸಂಚಾರಿ ಜೀವನ ನಡೆಸುತ್ತಿರುವ ಬಯಲು ಕಮ್ಮಾರರ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅರ್ಹರನ್ನು ಗುರುತಿಸಿ, ವಾಸಸ್ಥಳ ಹಾಗೂ ಸ್ವ ಉದ್ಯೋಗ ಯೋಜನೆಗಳಡಿ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.</p>.<div><blockquote>ಬಿಸಿಲು, ಮಳೆ ಎನ್ನದೆ ದಿನಪೂರ್ತಿ ದುಡಿಯುತ್ತೇವೆ. ಆದರೂ ಸರಿಯಾದ ಬೆಲೆ ಸಿಗದೆ, ಸೌಲಭ್ಯಗಳ ಕೊರತೆಯಿಂದ ಬದುಕು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಾದರೂ ಸರ್ಕಾರ ನೆರವಿಗೆ ಬರಬೇಕು </blockquote><span class="attribution">ಅಂಕುಶ, ಬಯಲು ಕಮ್ಮಾರ, ನಾಸಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲೇ ತಾತ್ಕಾಲಿಕವಾಗಿ ತಂಗಿ ಬದುಕು ಸಾಗಿಸುತ್ತಿರುವ ಬಯಲು ಕಮ್ಮಾರರ ಜೀವನ ಇನ್ನೂ ಅನಿಶ್ಚಿತತೆಯಲ್ಲೇ ಮುಂದುವರಿದಿದೆ. ಬಿಸಿಲು, ಚಳಿ, ಗಾಳಿ ಎನ್ನದೆ ದಿನವಿಡೀ ಕಬ್ಬಿಣದ ಕಾಯಕದಲ್ಲಿ ತೊಡಗಿರುವ ಈ ಶ್ರಮಜೀವಿಗಳು, ರೈತರಿಗೆ ಅಗತ್ಯ ಕೃಷಿ ಉಪಕರಣಗಳನ್ನು ತಯಾರಿಸಿ ಕೊಡುವ ಮೂಲಕ ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.</p>.<p>ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುವ ಕಮ್ಮಾರರು, ಒಂದೇ ಸ್ಥಳದಲ್ಲಿ ಎರಡು–ಮೂರು ದಿನಗಳವರೆಗೆ ತಂಗಿ ಕುಡುಗೋಲು, ಕೊಡಲಿ, ಗುದ್ದಲಿ, ಕುರುಪಿ, ಕೊಯ್ತಾ, ಹಾರೆ, ಕುಳ ಹಾಗೂ ಇತರೆ ಕೃಷಿ ಉಪಕರಣಗಳನ್ನು ತಯಾರಿಸುತ್ತಾರೆ. ಕಡಿಮೆ ವೆಚ್ಚ, ಕಡಿಮೆ ಸಮಯದಲ್ಲಿ ಉಪಕರಣಗಳು ಸಿಗುವುದರಿಂದ ರೈತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.</p>.<p>ಬೇಡಿಕೆಯ ಅನುಸಾರ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸುತ್ತಲೇ ಜೀವನ ಸಾಗಿಸುವ ಈ ಕುಟುಂಬಗಳಲ್ಲಿ ಗಂಡು–ಹೆಣ್ಣು ಭೇದವಿಲ್ಲ. ಎಲ್ಲರೂ ಶ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಬಯಲಲ್ಲೇ ಕುಲುಮೆ ಹಚ್ಚಿ ಕಬ್ಬಿಣ ಕಾಯಿಸುವ ಪತಿ, ಅದನ್ನು ಸುತ್ತಿಗೆಯಿಂದ ಬಡಿದು ಆಕಾರ ನೀಡುವ ಪತ್ನಿ..ಹೀಗೆ ಕುಟುಂಬದ ಸಮೂಹ ಶ್ರಮದಿಂದ ಉಪಕರಣಗಳು ಸಿದ್ಧವಾಗುತ್ತವೆ. ಒಂದು ಉಪಕರಣ ತಯಾರಿಸಲು ಸರಾಸರಿ 15 ರಿಂದ 30 ನಿಮಿಷಗಳವರೆಗೆ ಬೇಕಾಗುತ್ತದೆ.</p>.<p>‘ನಾವು ದಿನಪೂರ್ತಿ ದುಡಿದರೆ ಮಾತ್ರ ಜೀವನ ಸಾಗುತ್ತದೆ. ಒಂದೇ ಸ್ಥಳದಲ್ಲಿ ನೆಲೆಸಲು ಸಾಧ್ಯವಿಲ್ಲ. ಮಕ್ಕಳನ್ನು ಶಿಕ್ಷಣಕ್ಕಾಗಿ ಊರಲ್ಲೇ ಬಿಟ್ಟು ಬಂದಿದ್ದೇವೆ. ಸರ್ಕಾರ ಮನೆ ಹಾಗೂ ಸಾಲ ಸೌಲಭ್ಯ ನೀಡಿದರೆ ಬದುಕಿಗೆ ಸ್ಥಿರತೆ ಬರುತ್ತದೆ’ ಎನ್ನುತ್ತಾರೆ ಕಮ್ಮಾರರು.</p>.<p>‘ನಮ್ಮ ಮನೆತನದಲ್ಲಿ ತಲತಲಾಂತರಗಳಿಂದ ಬಂದಿರುವ ಕಸುಬು. ಇದೇ ನಮ್ಮ ಜೀವನಕ್ಕೆ ಆಧಾರ. ಇದನ್ನು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ’ ಎಂದು ಕಮ್ಮಾರ ಲೋಕೇಶ ಹೇಳಿದರು.</p>.<p>‘ಮುಂಗಾರು ಹಂಗಾಮಿನಲ್ಲಿ ಹಳ್ಳಿಗಳಲ್ಲಿ ಬೀಡು ಬಿಟ್ಟು ರೈತಾಪಿ ಸಾಮಗ್ರಿಗಳನ್ನು ತಯಾರಿಸಿ ಮಾರುತ್ತೇವೆ. ಹಣವಾಗಲಿ, ಧಾನ್ಯವಾಗಲಿ ಪಡೆದು ಮುಂದಿನ ಹಳ್ಳಿಗೆ ತೆರಳುತ್ತೇವೆ’ ಎಂದು ತಾಲ್ಲೂಕಿನ ಗಂಗಮ್ಮನಹಳ್ಳಿಯಲ್ಲಿ ತಂಗಿದ್ದ ಅಖಿಲೇಶ ಹೇಳಿದರು.</p>.<p>ವಾಸಸ್ಥಳವಿಲ್ಲದೆ ರಸ್ತೆ ಬದಿಯಲ್ಲೇ ತಂಗುವುದು, ಶುದ್ಧ ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೌಲಭ್ಯಗಳ ಕೊರತೆ ಇವರ ಬದುಕನ್ನು ಇನ್ನಷ್ಟು ಕಷ್ಟಕರಗೊಳಿಸಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸುವ ಈ ಶ್ರಮಜೀವಿಗಳು ಇನ್ನೂ ಸರ್ಕಾರದ ಯೋಜನೆಗಳ ಅಂಚಿನಲ್ಲೇ ಉಳಿದಿರುವುದು ವಿಷಾದಕರ ಸಂಗತಿಯಾಗಿದೆ.</p>.<p>ತಹಶೀಲ್ದಾರ್ ಶಿವಾನಂದ ಮೇತ್ರೆ ಪ್ರತಿಕ್ರಿಯಿಸಿ, ‘ತಾಲ್ಲೂಕಿನಲ್ಲಿ ಸಂಚಾರಿ ಜೀವನ ನಡೆಸುತ್ತಿರುವ ಬಯಲು ಕಮ್ಮಾರರ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅರ್ಹರನ್ನು ಗುರುತಿಸಿ, ವಾಸಸ್ಥಳ ಹಾಗೂ ಸ್ವ ಉದ್ಯೋಗ ಯೋಜನೆಗಳಡಿ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.</p>.<div><blockquote>ಬಿಸಿಲು, ಮಳೆ ಎನ್ನದೆ ದಿನಪೂರ್ತಿ ದುಡಿಯುತ್ತೇವೆ. ಆದರೂ ಸರಿಯಾದ ಬೆಲೆ ಸಿಗದೆ, ಸೌಲಭ್ಯಗಳ ಕೊರತೆಯಿಂದ ಬದುಕು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಾದರೂ ಸರ್ಕಾರ ನೆರವಿಗೆ ಬರಬೇಕು </blockquote><span class="attribution">ಅಂಕುಶ, ಬಯಲು ಕಮ್ಮಾರ, ನಾಸಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>