<p>ಹುಲಸೂರ: ಬೇಸಿಗೆಯ ತೀವ್ರ ಬಿಸಿಲಿನಿಂದ ನೀರಿನ ಮೂಲಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿ ಹಾಗೂ ಪ್ರಾಣಿಗಳ ದಾಹ ನೀಗಿಸಲು ರಾಮಾನಂದಚಾರ್ಯ ಹಾಗೂ ನರೇಂದ್ರ ಚಾರ್ಯ ದಕ್ಷಿಣ ಪೀಠ ನಾಣೇಜ್ ಧಾಮದ ಭಕ್ತರು ಪಟ್ಟಣದ ಹೊರವಲಯದ ಜಮೀನುಗಳಲ್ಲಿ ಕುಡಿಯುವ ನೀರಿನ ಗುಂಡಿಗಳನ್ನು ನಿರ್ಮಿಸಿದ್ದಾರೆ.</p>.<p>ಪಟ್ಟಣದಲ್ಲಿ ಸುಮಾರು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ನೀರಿನ ಕೊರತೆಯಿಂದ ಪಕ್ಷಿ–ಪ್ರಾಣಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಇದನ್ನು ಮನಗಂಡ ಭಕ್ತರು ಚನ್ನಪ್ಪ ಭೋಪಳೆ ಹಾಗೂ ಶಿವಾಜಿ ಭೂಸಾರೆ ಅವರ ಜಮೀನುಗಳಲ್ಲಿ ಗುಂಡಿ ತೋಡಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದಾರೆ.</p>.<p>ಈ ಮೂಲಕ ಪ್ರಾಣಿ–ಪಕ್ಷಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿರುವ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>ಈ ಸೇವಾಕಾರ್ಯದಲ್ಲಿ ರೋಹಿದಾಸ ವತಾರೆ, ವೆಂಕಟ ಸಾಯಗಾಂವೆ, ಶಿವಾಜಿ ಭೂಸಾರೆ, ದಿಲೀಪ ವಾಲೆ, ಕಿಶನ್ ಗಾಯಕವಾಡ, ಚನ್ನಪ್ಪ ಭೋಪಳೆ, ಅನೀಲ ವಾಲೆ, ಸಂಜೀವ ರಾಸೂರೆ, ಸಂಜೀವ ಟೊಂಪೆ, ರಮೇಶ ಹಂದಿಕೆರೆ, ನಾಗೇಶ ಭೋಪಳೆ, ದಯಾನಂದ ಗಾಯಕವಾಡ, ರಾಮ ಸೊಲಂಕೆ, ಮಹಾದೇವಿ ತೆಲಂಗಾಣ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-33-843656863</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಲಸೂರ: ಬೇಸಿಗೆಯ ತೀವ್ರ ಬಿಸಿಲಿನಿಂದ ನೀರಿನ ಮೂಲಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿ ಹಾಗೂ ಪ್ರಾಣಿಗಳ ದಾಹ ನೀಗಿಸಲು ರಾಮಾನಂದಚಾರ್ಯ ಹಾಗೂ ನರೇಂದ್ರ ಚಾರ್ಯ ದಕ್ಷಿಣ ಪೀಠ ನಾಣೇಜ್ ಧಾಮದ ಭಕ್ತರು ಪಟ್ಟಣದ ಹೊರವಲಯದ ಜಮೀನುಗಳಲ್ಲಿ ಕುಡಿಯುವ ನೀರಿನ ಗುಂಡಿಗಳನ್ನು ನಿರ್ಮಿಸಿದ್ದಾರೆ.</p>.<p>ಪಟ್ಟಣದಲ್ಲಿ ಸುಮಾರು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ನೀರಿನ ಕೊರತೆಯಿಂದ ಪಕ್ಷಿ–ಪ್ರಾಣಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಇದನ್ನು ಮನಗಂಡ ಭಕ್ತರು ಚನ್ನಪ್ಪ ಭೋಪಳೆ ಹಾಗೂ ಶಿವಾಜಿ ಭೂಸಾರೆ ಅವರ ಜಮೀನುಗಳಲ್ಲಿ ಗುಂಡಿ ತೋಡಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದಾರೆ.</p>.<p>ಈ ಮೂಲಕ ಪ್ರಾಣಿ–ಪಕ್ಷಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿರುವ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>ಈ ಸೇವಾಕಾರ್ಯದಲ್ಲಿ ರೋಹಿದಾಸ ವತಾರೆ, ವೆಂಕಟ ಸಾಯಗಾಂವೆ, ಶಿವಾಜಿ ಭೂಸಾರೆ, ದಿಲೀಪ ವಾಲೆ, ಕಿಶನ್ ಗಾಯಕವಾಡ, ಚನ್ನಪ್ಪ ಭೋಪಳೆ, ಅನೀಲ ವಾಲೆ, ಸಂಜೀವ ರಾಸೂರೆ, ಸಂಜೀವ ಟೊಂಪೆ, ರಮೇಶ ಹಂದಿಕೆರೆ, ನಾಗೇಶ ಭೋಪಳೆ, ದಯಾನಂದ ಗಾಯಕವಾಡ, ರಾಮ ಸೊಲಂಕೆ, ಮಹಾದೇವಿ ತೆಲಂಗಾಣ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-33-843656863</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>