<p><strong>ಹುಲಸೂರ</strong>: ಸಾರಿಗೆ ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಪ್ರಯಾಣಿಕರೊಬ್ಬರು ಬಸ್ನಲ್ಲಿ ಮರೆತು ಹೋಗಿದ್ದ ನಗದು ಹಾಗೂ ಬೆಳ್ಳಿಯ ಆಭರಣ ಇರುವ ಚೀಲವನ್ನು ಸುರಕ್ಷಿತವಾಗಿ ಮರಳಿ ನೀಡಿದ ಘಟನೆ ಶುಕ್ರವಾರ ನಡೆದಿದೆ.</p>.<p>ದೇವಣಿ ತಾಲ್ಲೂಕಿನ ಚಾವನ್ಹಿಪ್ಪರ್ಗ ಗ್ರಾಮದ ಮಶೀದ್ ಅಲಾವುದ್ದೀನ್ ಶೇಖ್ ಹಾಗೂ ಪುತ್ರಿ ಅಸ್ಮತಾಬಿ ಹೈದರ್ ಶೇಖ್ ಅವರು ಬೆಳಿಗ್ಗೆ ಬಸವಕಲ್ಯಾಣದಿಂದ ವಾಲಂಡಿಗೆ ಪ್ರಯಾಣಿಸಿದ್ದರು. ವಾಲಂಡಿಯಲ್ಲಿ ₹7,100 ನಗದು ಹಾಗೂ ಐದು ತೊಲೆ ಬೆಳ್ಳಿಯ ಸರ ಹೊಂದಿದ್ದ ಚೀಲವನ್ನು ಬಸ್ನಲ್ಲೇ ಬಿಟ್ಟು ಇಳಿದಿದ್ದಾರೆ.</p>.<p>ನಂತರ ಬಸ್ನಲ್ಲಿ ಚೀಲ ಬಿಟ್ಟಿರುವುದಾಗಿ ಬಸವಕಲ್ಯಾಣ ಡಿಪೊ ಅಧಿಕಾರಿಗೆ ತಿಳಿಸಿದ್ದಾರೆ. ನಂತರ ಬಸ್ ಚಾಲಕ ಬಜರಂಗ ಹಾಗೂ ನಿರ್ವಾಹಕ ವೀರಪ್ಪ ಕಾಳೆ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ಸಿಬ್ಬಂದಿ ಬಸ್ನ್ನು ಪರಿಶೀಲಿಸಿ ಚೀಲವನ್ನು ಪತ್ತೆಹಚ್ಚಿದರು.</p>.<p>ಬಳಿಕ ಬಸ್ ಎರಡನೇ ಸುತ್ತಿನಲ್ಲಿ ವಾಲಂಡಿಗೆ ಮರಳಿದಾಗ, ಚೀಲದಲ್ಲಿದ್ದ ನಗದು ಮತ್ತು ಬೆಳ್ಳಿಯ ಸರವನ್ನು ಶೇಖ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.</p>.<p>ಸಾಮಾಜಿಕ ಕಾರ್ಯಕರ್ತ ಹಸನ್ ಮೊಮಿನ್, ರಾಷ್ಟ್ರಸೇವಾದಳದ ಹಿರಿಯ ಕಾರ್ಯಕರ್ತ ಅಂಕುಶ್ ಗಾಯಕ್ವಾಡ್, ರಾಮದಾಸ್ ಬನ್ಸೋಡೆ, ಅರುಣ್ ಪಾಟೀಲ, ಸುಶಾಂತ್ ಸಪಾನೆ ಸೇರಿದಂತೆ ಹಲವರು ಚಾಲಕ ಮತ್ತು ನಿರ್ವಾಹಕರನ್ನು ಅಭಿನಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-33-1871500199</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ</strong>: ಸಾರಿಗೆ ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಪ್ರಯಾಣಿಕರೊಬ್ಬರು ಬಸ್ನಲ್ಲಿ ಮರೆತು ಹೋಗಿದ್ದ ನಗದು ಹಾಗೂ ಬೆಳ್ಳಿಯ ಆಭರಣ ಇರುವ ಚೀಲವನ್ನು ಸುರಕ್ಷಿತವಾಗಿ ಮರಳಿ ನೀಡಿದ ಘಟನೆ ಶುಕ್ರವಾರ ನಡೆದಿದೆ.</p>.<p>ದೇವಣಿ ತಾಲ್ಲೂಕಿನ ಚಾವನ್ಹಿಪ್ಪರ್ಗ ಗ್ರಾಮದ ಮಶೀದ್ ಅಲಾವುದ್ದೀನ್ ಶೇಖ್ ಹಾಗೂ ಪುತ್ರಿ ಅಸ್ಮತಾಬಿ ಹೈದರ್ ಶೇಖ್ ಅವರು ಬೆಳಿಗ್ಗೆ ಬಸವಕಲ್ಯಾಣದಿಂದ ವಾಲಂಡಿಗೆ ಪ್ರಯಾಣಿಸಿದ್ದರು. ವಾಲಂಡಿಯಲ್ಲಿ ₹7,100 ನಗದು ಹಾಗೂ ಐದು ತೊಲೆ ಬೆಳ್ಳಿಯ ಸರ ಹೊಂದಿದ್ದ ಚೀಲವನ್ನು ಬಸ್ನಲ್ಲೇ ಬಿಟ್ಟು ಇಳಿದಿದ್ದಾರೆ.</p>.<p>ನಂತರ ಬಸ್ನಲ್ಲಿ ಚೀಲ ಬಿಟ್ಟಿರುವುದಾಗಿ ಬಸವಕಲ್ಯಾಣ ಡಿಪೊ ಅಧಿಕಾರಿಗೆ ತಿಳಿಸಿದ್ದಾರೆ. ನಂತರ ಬಸ್ ಚಾಲಕ ಬಜರಂಗ ಹಾಗೂ ನಿರ್ವಾಹಕ ವೀರಪ್ಪ ಕಾಳೆ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ಸಿಬ್ಬಂದಿ ಬಸ್ನ್ನು ಪರಿಶೀಲಿಸಿ ಚೀಲವನ್ನು ಪತ್ತೆಹಚ್ಚಿದರು.</p>.<p>ಬಳಿಕ ಬಸ್ ಎರಡನೇ ಸುತ್ತಿನಲ್ಲಿ ವಾಲಂಡಿಗೆ ಮರಳಿದಾಗ, ಚೀಲದಲ್ಲಿದ್ದ ನಗದು ಮತ್ತು ಬೆಳ್ಳಿಯ ಸರವನ್ನು ಶೇಖ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.</p>.<p>ಸಾಮಾಜಿಕ ಕಾರ್ಯಕರ್ತ ಹಸನ್ ಮೊಮಿನ್, ರಾಷ್ಟ್ರಸೇವಾದಳದ ಹಿರಿಯ ಕಾರ್ಯಕರ್ತ ಅಂಕುಶ್ ಗಾಯಕ್ವಾಡ್, ರಾಮದಾಸ್ ಬನ್ಸೋಡೆ, ಅರುಣ್ ಪಾಟೀಲ, ಸುಶಾಂತ್ ಸಪಾನೆ ಸೇರಿದಂತೆ ಹಲವರು ಚಾಲಕ ಮತ್ತು ನಿರ್ವಾಹಕರನ್ನು ಅಭಿನಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-33-1871500199</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>