<p><strong>ಹುಲಸೂರ:</strong> ತಾಲ್ಲೂಕಿನ ಕದೇಪುರ ಗ್ರಾಮದಲ್ಲಿ 18ನೇ ವಾರ್ಷಿಕ ನಿರಂತರ ಅಖಂಡ ಹರಿನಾಮ ಸಪ್ತಾಹ ಹಾಗೂ ಗ್ರಂಥರಾಜ್ ಜ್ಞಾನೇಶ್ವರಿ ಪಾರಾಯಣ ಸಮಾರಂಭ ಭಕ್ತಿಭಾವದ ವಾತಾವರಣದಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು. ವಾರಪೂರ್ತಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಆಧ್ಯಾತ್ಮಿಕ ವಾತಾವರಣ ಹೆಚ್ಚಿಸಿದವು.</p>.<p>ಕಾರ್ಯಕ್ರಮದ ಅಂಗವಾಗಿ ಸದ್ಗುರು ಗುರುಬಾಬಾ ಮಹಾರಾಜ್ ಔಸೇಕರ್ ಅವರ ನೇತೃತ್ವದಲ್ಲಿ ನಡೆದ ಚಕ್ರಿ ಭಜನೆ ವಿಶೇಷ ಆಕರ್ಷಣೆಯಾಯಿತು. ಭಕ್ತರು ವೃತ್ತಾಕಾರವಾಗಿ ನಿಂತು, ತಾಳಮದ್ದಳೆಗಳ ಜೊತೆಗೆ ಒಂದೇ ಲಯದಲ್ಲಿ ಹರಿನಾಮವನ್ನು ಗಾಯನ ಮಾಡುತ್ತಾ ಭಕ್ತಿ ಭಾವದಲ್ಲಿ ತಲ್ಲೀನರಾದರು. ಈ ಚಕ್ರಿ ಭಜನೆ ಕೇವಲ ಭಕ್ತಿಗಾನವಾಗಿರದೆ, ಸಮೂಹದಲ್ಲಿ ಏಕತೆ, ಶ್ರದ್ಧೆ ಮತ್ತು ಆತ್ಮಸಾಕ್ಷಾತ್ಕಾರದ ಸಂಕೇತವಾಗಿ ಕಾಣಿಸಿಕೊಂಡಿತು. ಭಜನೆ ನಡೆಯುವ ವೇಳೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.</p>.<p>ನಂತರ ಪಂಢರಪುರದ ಏಕನಾಥ ಮಹಾರಾಜ ಹಂದೆ ಅವರು ಕೀರ್ತನೆ ನಡೆಸಿ, ಭಕ್ತರಿಗೆ ಧಾರ್ಮಿಕ ಸಂದೇಶಗಳನ್ನು ನೀಡಿದರು. ಜೀವನದಲ್ಲಿ ಸತ್ಪಥ, ನೈತಿಕತೆ ಹಾಗೂ ಭಗವಂತನ ಭಕ್ತಿ ಮಹತ್ವವನ್ನು ವಿವರಿಸಿದರು.</p>.<p>‘ಈ ಅಖಂಡ ಹರಿನಾಮ ಸಪ್ತಾಹಕ್ಕೆ ಸ್ಥಳೀಯ ಶಾಸಕ ಶರಣು ಸಲಗರ ಭೇಟಿ ನೀಡಿ ಭಕ್ತರಿಗೆ ಶುಭಾಶಯ ಕೋರಿದರು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಮೌಲ್ಯಗಳನ್ನು ಬಲಪಡಿಸುತ್ತವೆ’ ಎಂದು ಅವರು ಅಭಿಪ್ರಾಯಪಟ್ಟರು.</p>.<p>ಈ ವೇಳೆ ಭೀಮ್ ಪಾಟೀಲ್ ಮತ್ತು ಸಂದೀಪ ಬಿರಾದಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಶಿಸ್ತಿನಿಂದ ನಡೆದವು. ಗೋವಿಂದ ಮಹಾರಾಜ್, ತಾನಾಜಿ ಮುಳೆ, ಜ್ಞಾನೋಬ ಬಿರಾದಾರ್, ರಾಜಕುಮಾರ ಬಿರಾದಾರ್, ಪ್ರದೀಪ್ ಬಿರಾದಾರ್, ದಯಾನಂದ ಬಿರಾದಾರ್, ಪ್ರಶಾಂತ ಬೋರೋಲೆ, ಗುಂಡಪ್ಪ ಪಾಂಚಾಲ್, ಕಿಶೋರ ಬಿರಾದಾರ್ ಸೇರಿದಂತೆ ಅನೇಕರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260319-33-987143138</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ತಾಲ್ಲೂಕಿನ ಕದೇಪುರ ಗ್ರಾಮದಲ್ಲಿ 18ನೇ ವಾರ್ಷಿಕ ನಿರಂತರ ಅಖಂಡ ಹರಿನಾಮ ಸಪ್ತಾಹ ಹಾಗೂ ಗ್ರಂಥರಾಜ್ ಜ್ಞಾನೇಶ್ವರಿ ಪಾರಾಯಣ ಸಮಾರಂಭ ಭಕ್ತಿಭಾವದ ವಾತಾವರಣದಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು. ವಾರಪೂರ್ತಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಆಧ್ಯಾತ್ಮಿಕ ವಾತಾವರಣ ಹೆಚ್ಚಿಸಿದವು.</p>.<p>ಕಾರ್ಯಕ್ರಮದ ಅಂಗವಾಗಿ ಸದ್ಗುರು ಗುರುಬಾಬಾ ಮಹಾರಾಜ್ ಔಸೇಕರ್ ಅವರ ನೇತೃತ್ವದಲ್ಲಿ ನಡೆದ ಚಕ್ರಿ ಭಜನೆ ವಿಶೇಷ ಆಕರ್ಷಣೆಯಾಯಿತು. ಭಕ್ತರು ವೃತ್ತಾಕಾರವಾಗಿ ನಿಂತು, ತಾಳಮದ್ದಳೆಗಳ ಜೊತೆಗೆ ಒಂದೇ ಲಯದಲ್ಲಿ ಹರಿನಾಮವನ್ನು ಗಾಯನ ಮಾಡುತ್ತಾ ಭಕ್ತಿ ಭಾವದಲ್ಲಿ ತಲ್ಲೀನರಾದರು. ಈ ಚಕ್ರಿ ಭಜನೆ ಕೇವಲ ಭಕ್ತಿಗಾನವಾಗಿರದೆ, ಸಮೂಹದಲ್ಲಿ ಏಕತೆ, ಶ್ರದ್ಧೆ ಮತ್ತು ಆತ್ಮಸಾಕ್ಷಾತ್ಕಾರದ ಸಂಕೇತವಾಗಿ ಕಾಣಿಸಿಕೊಂಡಿತು. ಭಜನೆ ನಡೆಯುವ ವೇಳೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.</p>.<p>ನಂತರ ಪಂಢರಪುರದ ಏಕನಾಥ ಮಹಾರಾಜ ಹಂದೆ ಅವರು ಕೀರ್ತನೆ ನಡೆಸಿ, ಭಕ್ತರಿಗೆ ಧಾರ್ಮಿಕ ಸಂದೇಶಗಳನ್ನು ನೀಡಿದರು. ಜೀವನದಲ್ಲಿ ಸತ್ಪಥ, ನೈತಿಕತೆ ಹಾಗೂ ಭಗವಂತನ ಭಕ್ತಿ ಮಹತ್ವವನ್ನು ವಿವರಿಸಿದರು.</p>.<p>‘ಈ ಅಖಂಡ ಹರಿನಾಮ ಸಪ್ತಾಹಕ್ಕೆ ಸ್ಥಳೀಯ ಶಾಸಕ ಶರಣು ಸಲಗರ ಭೇಟಿ ನೀಡಿ ಭಕ್ತರಿಗೆ ಶುಭಾಶಯ ಕೋರಿದರು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಮೌಲ್ಯಗಳನ್ನು ಬಲಪಡಿಸುತ್ತವೆ’ ಎಂದು ಅವರು ಅಭಿಪ್ರಾಯಪಟ್ಟರು.</p>.<p>ಈ ವೇಳೆ ಭೀಮ್ ಪಾಟೀಲ್ ಮತ್ತು ಸಂದೀಪ ಬಿರಾದಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಶಿಸ್ತಿನಿಂದ ನಡೆದವು. ಗೋವಿಂದ ಮಹಾರಾಜ್, ತಾನಾಜಿ ಮುಳೆ, ಜ್ಞಾನೋಬ ಬಿರಾದಾರ್, ರಾಜಕುಮಾರ ಬಿರಾದಾರ್, ಪ್ರದೀಪ್ ಬಿರಾದಾರ್, ದಯಾನಂದ ಬಿರಾದಾರ್, ಪ್ರಶಾಂತ ಬೋರೋಲೆ, ಗುಂಡಪ್ಪ ಪಾಂಚಾಲ್, ಕಿಶೋರ ಬಿರಾದಾರ್ ಸೇರಿದಂತೆ ಅನೇಕರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260319-33-987143138</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>