ಭಾಲ್ಕಿ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಸುಮಾರು ₹5.34 ಲಕ್ಷ ಮೌಲ್ಯದ 15 ಜಾನುವಾರುಗಳನ್ನು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಜಾನುವಾರು ಸಾಗಿಸುತ್ತಿದ್ದ ಹಣಮಂತ ಶರಣಪ್ಪ ಬಾವುಗೆ ಮತ್ತು ಇಸ್ಮಾಯಿಲ್ ವಲಿಸಾಬ್ ಖುರೇಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಗೂಡ್ಸ್ ಟೆಂಪೊ ಜಪ್ತಿ ಮಾಡಿಕೊಳ್ಳಲಾಗಿದೆ.
‘ಮಂಗಳವಾರ ರಾತ್ರಿ ಹುಲಸೂರ ಕಡೆಯಿಂದ ಭಾತಂಬ್ರಾ ಕಡೆಗೆ ಗೂಡ್ಸ್ ವಾಹನದಲ್ಲಿ 15 ಜಾನುವಾರುಗಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಪಿಎಸ್ಐ ಮಹೇಂದ್ರಕುಮಾರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ತಂಡ ರಚಿಸಿ, ಭಾತಂಬ್ರಾ ರಸ್ತೆಯ ಮದರಸಾ ದರ್ಗಾದ ಸಮೀಪ ಜಾನುವಾರುಗಳನ್ನು ರಕ್ಷಿಸಲಾಗಿದೆ. ಪಶು ವೈದ್ಯಾಧಿಕಾರಿ ಡಾ.ಸತೀಶ ಭೋಸ್ಲೆ, ಡಾ.ರಾವಸಾಬ ಪಾಟೀಲ ಪರೀಕ್ಷಿಸಿದ ನಂತರ ಅವುಗ ಳನ್ನು ಕರಡ್ಯಾಳ ಗೋಶಾಲೆಗೆ ಕಳುಹಿಸಲಾ ಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ಯುವಕರಾದ ಸಂಗಮೇಶ ವಾಡೆ, ವಿಶ್ವ ಹೂಗಾರ, ಮಲ್ಲು ಸೋಲಾಪೂರೆ, ಮಹೇಶ ಭಂಡೆ, ಸಚಿನ್ ಅಹ್ಮದಾಬಾದೆ, ಸಚಿನ್ ಮೇಳಕುಂದೆ ಪೊಲೀಸರಿಗೆ ಸಹಕಾರ ನೀಡಿದರು.