ಬೀದರ್: ಅನಕ್ಷರಸ್ಥ ಜೈಲು ವಾಸಿಗಳು ಸಾಕ್ಷರತಾ ಕಲಿಕಾ ಕೇಂದ್ರದ ಪೂರ್ಣ ಲಾಭ ಪಡೆಯಬೇಕು. ಅಕ್ಷರ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಬಸವರಾಜ ಎಸ್.ಚೇಗರೆಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಲೋಕ ಶಿಕ್ಷಣ ಸಮತಿಯ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಸಾಕ್ಷರತಾ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಸ್ವಯಂ ಸೇವಕರು ಹಾಗೂ ಕಲಿತಿರುವ ಅನೇಕ ಕಾರಾಗೃಹ ವಾಸಿಗಳು, ಅನಕ್ಷರಸ್ಥರಿಗೆ ಅಕ್ಷರ ಅಭ್ಯಾಸ ಮಾಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ ಬಾಬು, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಕೆ. ಕನಕಟ್ಟೆ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವರಾಜ ಪಾಟೀಲ, ಡಯಟ್ ನೋಡಲ್ ಅಧಿಕಾರಿ ಕುಶಲರಾವ್ ಯರನಳ್ಳಿ ಕಾರಾಗೃಹ ವಾಸಿಗಳಿಗೆ ಕಲಿಕಾ ಉಪಕರಣಗಳನ್ನು ವಿತರಿಸಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಉಪನ್ಯಾಸಕ ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ. ಕುಚಬಾಳ ಮಾತನಾಡಿದರು.
ಜಾನಪದ ಕಲಾವಿದರಾದ ದೇವದಾಸ ಚಿಮಕೋಡ ಹಾಗೂ ಬಕ್ಕಪ್ಪ ದಂಡಿನ್ ಸಾಕ್ಷರತಾ ಗೀತೆಗಳನ್ನು ಹಾಡಿದರು. ಸಂಗಯ್ಯ ಸ್ವಾಮಿ ಸ್ವಾಗತಿಸಿದರು. ವಯಸ್ಕರ ಶಿಕ್ಷಣಾಧಿಕಾರಿ ಶಿವರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟರಾವ್ ಭಾಗ್ಯನಗರ ನಿರೂಪಿಸಿದರು. ಶಿವರಾಜ ಮಲ್ಕಾಪುರೆ ವಂದಿಸಿದರು.