ಬಸವಕಲ್ಯಾಣ: ಕೆಲಸ ಅರಿಸಿ ದುಬೈಗೆ ಹೋಗಿ ಅಲ್ಲಿಯೇ ಸಾವನ್ನಪ್ಪಿದ್ದ ನಗರದ ಕೈಕಾಡಿ ಓಣಿಯ ಹೆಳವ ಸಮುದಾಯದ ಸುನಿಲ ಅವರ ಕುಟುಂಬಕ್ಕೆ ಮುಖಂಡ ಪ್ರದೀಪ ವಾತಡೆಯವರು ₹10 ಲಕ್ಷದ ವಿಮೆಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಸುನಿಲ ದುಬೈನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಕೆಲ ತಾಂತ್ರಿಕ ಕಾರಣಗಳಿಂದಾಗಿ ಅವರ ಮೃತದೇಹ ತರಲು ವಿಳಂಬವಾಗಿತ್ತು. ಈ ಕಾರ್ಯದಲ್ಲಿಯೂ ಪ್ರದೀಪ ವಾತಡೆಯವರು ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಮತ್ತಿತರರ ಸಹಾಯ ಪಡೆದು ನೆರವಾದರು.
ಸ್ವಂತ ಹಣದಿಂದ ವಿಮಾ ಕಂತುಗಳನ್ನು ತುಂಬಿ ಸುನಿಲ ಅವರ ತಾಯಿ ಮತ್ತು ಪತ್ನಿ ಹೆಸರಲ್ಲಿ ತಲಾ ₹5 ಲಕ್ಷದ ವಿಮೆ ಮಾಡಿಸಿದ್ದಾರೆ. ವಿಮೆಯ ದಾಖಲೆಗಳನ್ನು ಸೋಮವಾರ ಅವರ ಕುಟುಂಬದವರಿಗೆ ನೀಡಲಾಯಿತು.