ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟ ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಅವರು ಮಾತನಾಡಿ,‘ಜೀವಸಂಕುಲಕ್ಕೆ ಮಳೆ,ಬೆಳೆ,ಗಾಳಿ ಮೊದಲಾದ ಪಂಚಭೂತಗಳನ್ನು ಕರುಣಿಸಿರುವ ದೇವರನ್ನು ನೆನೆದು, ಕೃತಜ್ಞತೆ ಸಮರ್ಪಿಸುವ ಮೂಲಕ ಹೊಸ ವರ್ಷಕ್ಕೆ ಕಾಲಿರಿಸುವುದು ಸರಿಯಾದ ಸಂಸ್ಕೃತಿ. ಅದು ಭಾರತೀಯ ಶರಣ ಸಂಸ್ಕೃತಿಯ ತಿರುಳು’ ಎಂದು ಹೇಳಿದರು.