ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ|ಶಾಸಕ ಖಂಡ್ರೆಗೆ ಸಚಿವ ಸ್ಥಾನ: ಪಟಾಕಿ ಸಿಡಿಸಿ ಸಂಭ್ರಮ

Published 27 ಮೇ 2023, 14:35 IST
Last Updated 27 ಮೇ 2023, 14:35 IST
ಅಕ್ಷರ ಗಾತ್ರ

ಭಾಲ್ಕಿ: ರಾಜ್ಯದಲ್ಲಿ ಹೊಸದಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರಿಗೆ ಸಚಿವ ಸ್ಥಾನ ಲಭಿಸಿದ ಕಾರಣ ಪಟ್ಟಣದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಶನಿವಾರ ಹಿರಿಯ ಮುಖಂಡ ಅಶೋಕ ಮಡ್ಡೆ ನೇತೃತ್ವದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಸಂತಸ ವ್ಯಕ್ತಪಡಿಸಿ ನೂತನ ಸಚಿವ ಖಂಡ್ರೆ ಪರ ಘೋಷಣೆ ಕೂಗಿದರು.

ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಪ್ರಮುಖರಾದ ಧನರಾಜ ಕುಂದೆ, ಬುದ್ಧಾನಂದ ಶಿಂಧೆ, ಪಾಂಡುರಂಗ ಗಾಯಕವಾಡ್, ಲಿಯಾಖತ್, ಬಸವರಾಜ ಸೈನೂರೆ, ಮಹ್ಮದ್ ಖಾಜಾ, ಎಂ.ಪಿ.ರಾಜು, ಸುರೇಶ ಬಿರಾದಾರ, ಸಚಿನ್ ಸೋನಾಳೆ, ಮಹ್ಮದ್ ನಕೀಬ್, ಬಸವರಾಜ ಭಾವಿಕಟ್ಟಿ, ವಿಶ್ವಜೀತ ಬೋರ್ಡೆ, ಮಲ್ಲಿಕಾರ್ಜುನ ಸೇರಿ ಹಲವರು ಇದ್ದರು.

ಖಂಡ್ರೆ ಭಾವಚಿತ್ರಕ್ಕೆ ಹಾಲಿನ ಅಭಿಷೇಕ: ಶಾಸಕ ಈಶ್ವರ ಖಂಡ್ರೆಗೆ ಸಚಿವ ಸ್ಥಾನ ದಕ್ಕಿದ ಕಾರಣ ಲಕ್ಷ್ಮೀಬಾಯಿ ಖಂಡ್ರೆ ಹೊಲಿಗೆ ತರಬೇತಿ ಕೇಂದ್ರದ ವತಿಯಿಂದ ಖಂಡ್ರೆ ಅವರ ಭಾವಚಿತ್ರ ಇರುವ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಲಾ ಯಿತು.

ಪ್ರಮುಖರಾದ ಸಂತೋಷ ಫುಲೆ, ಮಹಾಂತೇಶ ವಂಜರೆ, ಸಂತೋಷ ಗಾಯಕವಾಡ್, ಸುನಿಲ್ ವಂಜರೆ, ವಿಶ್ವ ಬೋರ್ಡೆ, ಅಶೋಕ ಭಾವಿಕಟ್ಟೆ, ರಾಜಕುಮಾರ ಮಡಿಕೆ, ಸತೀಶ ಮಾಳಗೆ ಹಾಗೂ ರಾಹುಲ್ ಪ್ಯಾಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT