<p><strong>ಜನವಾಡ</strong>: ಶರಣ ವೀರಭದ್ರಪ್ಪ ಅವರ 75ನೇ ಜಾತ್ರಾ ಮಹೋತ್ಸವ ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.</p>.<p>ವೀರಭದ್ರಪ್ಪ ಅವರ ಭಾವಚಿತ್ರದ ಮೆರವಣಿಗೆ, ಗದ್ಗುಗೆಗೆ ಮಹಾ ರುದ್ರಾಭಿಷೇಕ, ಧೂನಿ ಪೂಜೆ ಜರುಗಿತು.</p>.<p>ವಿವಿಧೆಡೆಯಿಂದ ಬಂದಿದ್ದ ನೂರಾರು ಭಕ್ತರು ಗದ್ದುಗೆಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.</p>.<p>ವೀರಭದ್ರಪ್ಪ ಮಂದಿರ ಪರಿಸರದಲ್ಲಿ ಮಕ್ಕಳ ಆಟಿಕೆ, ಬೆಂಡು, ಬತಾಸು, ಅಳ್ಳು, ಕಾಯಿ, ಕರ್ಪೂರ, ಅಲಂಕಾರಿಕ ವಸ್ತುಗಳು ಸೇರಿ ವಿವಿಧ ಅಂಗಡಿಗಳು ತೆರೆದುಕೊಂಡಿದ್ದವು.</p>.<p>ಮಧ್ಯರಾತ್ರಿ ಶ್ರದ್ಧಾ ಭಕ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.</p>.<p>ಜಾತ್ರೆ ಅಂಗವಾಗಿ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೊನೆಯ ಕುಸ್ತಿ ವಿಜೇತಗೆ ಬೆಳ್ಳಿ ಕಡಗ ನೀಡಲಾಯಿತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಜನವಾಡ</strong>: ಶರಣ ವೀರಭದ್ರಪ್ಪ ಅವರ 75ನೇ ಜಾತ್ರಾ ಮಹೋತ್ಸವ ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.</p>.<p>ವೀರಭದ್ರಪ್ಪ ಅವರ ಭಾವಚಿತ್ರದ ಮೆರವಣಿಗೆ, ಗದ್ಗುಗೆಗೆ ಮಹಾ ರುದ್ರಾಭಿಷೇಕ, ಧೂನಿ ಪೂಜೆ ಜರುಗಿತು.</p>.<p>ವಿವಿಧೆಡೆಯಿಂದ ಬಂದಿದ್ದ ನೂರಾರು ಭಕ್ತರು ಗದ್ದುಗೆಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.</p>.<p>ವೀರಭದ್ರಪ್ಪ ಮಂದಿರ ಪರಿಸರದಲ್ಲಿ ಮಕ್ಕಳ ಆಟಿಕೆ, ಬೆಂಡು, ಬತಾಸು, ಅಳ್ಳು, ಕಾಯಿ, ಕರ್ಪೂರ, ಅಲಂಕಾರಿಕ ವಸ್ತುಗಳು ಸೇರಿ ವಿವಿಧ ಅಂಗಡಿಗಳು ತೆರೆದುಕೊಂಡಿದ್ದವು.</p>.<p>ಮಧ್ಯರಾತ್ರಿ ಶ್ರದ್ಧಾ ಭಕ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.</p>.<p>ಜಾತ್ರೆ ಅಂಗವಾಗಿ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೊನೆಯ ಕುಸ್ತಿ ವಿಜೇತಗೆ ಬೆಳ್ಳಿ ಕಡಗ ನೀಡಲಾಯಿತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>