ಬೀದರ್: ಜಗಪಾಲ್ಸಿಂಗ್ ಪವಾರ್ ಅವರ ಸಂಗೀತ ಸೇವೆ ಅನನ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ನುಡಿದರು.
ಸಂಗೀತ ಕಲಾ ಮಂಡಳ ವತಿಯಿಂದ ಜಗಪಾಲ್ಸಿಂಗ್ ಅವರ 22ನೇ ಪುಣ್ಯತಿಥಿ ಅಂಗವಾಗಿ ಇಲ್ಲಿಯ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಭಜನ ಸಂಧ್ಯಾ ಹಾಗೂ ಜೆ.ಎಸ್.ಪಿ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಸೇವೆಗಾಗಿ ಕೇಂದ್ರ ಸರ್ಕಾರ ಪವಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ನುಡಿದರು.
ಕಲಾವಿದರಾದ ರಾಮಲು ಗಾದಗಿ ಹಾಗೂ ಜಗನ್ನಾಥ ನಾನಕೇರಿ ಗಾಯನ ನಡೆಸಿಕೊಟ್ಟರು. ವೀರಭದ್ರಪ್ಪ ಗಾದಗಿ, ವಿಜಯಕುಮಾರ ಸೋನಾರೆ, ಅಪ್ಪಾರಾವ್ ಸೌದಿ, ಶಿವಾಜಿ ಸಗರ್, ವಿನಾಯಕ ಚೌಧರಿ, ಪ್ರೊ. ಎಸ್.ವಿ. ಕಲ್ಮಠ್, ರಘುನಾಥರಾವ್ ಪಾಂಚಾಳ್ ಇದ್ದರು.