ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಅಣ್ಣಾರಾವ್ ಸ್ಪರ್ಧೆಯನ್ನು ಉದ್ಘಾಟಿಸಿದರು. ರಾಜ್ಯ ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ಬಕ್ಕಪ್ಪ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ರೇಣುಕಾ ಹರ್ಷಾಂತ್ ಕೋಟೆ, ಸಮಾಜ ಸೇವಕಿ ಶ್ರೀದೇವಿ ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಜರಾಬಾಯಿ, ಮುಖ್ಯಶಿಕ್ಷಕ ರಾಜಕುಮಾರ ಬೀರಗೆ, ಸಿಆರ್ಸಿ ಗುಂಡೇರಾವ್ ಗುಪ್ತಾ, ಪ್ರಾಚಾರ್ಯ ತುಕಾರಾಮ ಯಾತಪ್ಪ, ಸ್ಪರ್ಧೆಯ ಆಯೋಜಕ ನರಸಪ್ಪ ಬಿ. ಜಾನಕನೋರ ಇದ್ದರು.
ಸ್ಪರ್ಧೆಯಲ್ಲಿ ಏಳು ಪ್ರೌಢಶಾಲೆಗಳ 24 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.