ಬಸವಕಲ್ಯಾಣ: ನಗರದಲ್ಲಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಿಂಗಳ ಹಿಂದೆ ಧರಣಿ ನಡೆಸಿ ಚರಂಡಿ ಸಮಸ್ಯೆ, ವಿದ್ಯುತ್ ದೀಪದ ಸಮಸ್ಯೆ ಬಗೆಹರಿಸಲು ಕೇಳಿಕೊಂಡರೂ ಕ್ರಮ ತೆಗೆದುಕೊಂಡಿಲ್ಲ. ನಾಯಿಗಳ ಹಾವಳಿಯ ಬಗ್ಗೆ ಮೊದಲೇ ಎಚ್ಚರಿಸಲಾಗಿತ್ತು. ಆದರೂ ಲಕ್ಷ್ಯ ನೀಡದ ಕಾರಣ ಗಾಡಿವಾನ ಗಲ್ಲಿಯ ಬಾಲಕಿ ಒಳಗೊಂಡು ಅನೇಕರಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಹೀಗಿದ್ದರೂ ಯಾರೂ ಗಮನಹರಿಸುತ್ತಿಲ್ಲ ಎಂದು ದೂರಲಾಯಿತು.
ಪಕ್ಷದ ಮುಖಂಡರಾದ ಸೈಯದ್ ಯಶ್ರಬಅಲಿ ಖಾದ್ರಿ ಹಾಗೂ ಬಸವಣ್ಣಪ್ಪ ನೆಲ್ಲಗಿ ಮಾತನಾಡಿದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅರ್ಷದ್ ಮಹಾಗಾವಿ, ಸಂಜೀವಕುಮಾರ ಸಂಗನೂರೆ, ಧನರಾಜ ರಾಜೋಳೆ, ಮಾರುತಿ ಫುಲೆ, ಪ್ರೀತಂ ಮದಲವಾಡಾ, ಗೌಸ, ಖಲೀಲಮಿಯ್ಯಾ, ರತೀಶ ಗುಂಗೆ, ಗುರುನಾಥ ಬೇಲೂರ ಹಾಗೂ ಖೈಯೀಮಸಾಬ್ ಇದ್ದರು.