ರಾಣಿ ಕಿತ್ತೂರ ಚನ್ನಮ್ಮ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಭುರಾವ್ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ವಿ. ಸೋಮಣ್ಣ ಸದಸ್ಯ ಬಸವಣಪ್ಪ ನೇಳಗೆ, ಶಂಕರೆಪ್ಪ ಹೆಡಗಾಪೂರೆ ಇದ್ದರು.
ಶಾಲೆಯ ಮುಖ್ಯಶಿಕ್ಷಕಿ ಪಾರಮ್ಮ ಸ್ವಾಗತಿಸಿದರು, ಮಂದಾಕಿನಿ ಉಪ್ಪೆ ವಂದಿಸಿದರು, ಕಾರ್ಯಕ್ರಮದ ಸಂಗ್ರಾಮ ಚಾಮಾ ಶಿಕ್ಷಕರು ನಿರೂಪಿಸಿದರು.