<p><strong>ಕಮಲನಗರ: </strong>ಮಳೆ ನೀರಿಕ್ಷೆಯಲ್ಲಿ ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಇಲಾಖೆ ಸಹ ಬಿತ್ತನೆಗೆ ಬೇಕಾದ ಬೀಜ ಹಾಗೂ ಗೊಬ್ಬರ ಸಂಗ್ರಹಿಸಿ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ.</p>.<p>ಒಂದು ವಾರದ ಹಿಂದೆ ಸುರಿದ ಸಾಧಾರಣ ಮಳೆಯಿಂದ ಕೊಂಚ ಸಮಾಧಾನ ಹೊಂದಿದ ರೈತರು ತಮ್ಮ ಹೊಲಗಳಲ್ಲಿ ಉಳುಮೆ, ಕೊಟ್ಟಿಗೆ ಗೊಬ್ಬರವನ್ನು ಹಾಕುತ್ತಿದ್ದಾರೆ. ಕೆಲವರು ಹೊಲದಲ್ಲಿಯ ಕಸ, ಕಡ್ಡಿಗಳನ್ನು ಆಯ್ದು ಹೊಲ ಸ್ವಚ್ಛ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಜಮೀನು ಹದವಾಗಿಟ್ಟುಕೊಂಡಿರುವ ರೈತರು ಇದೀಗ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಮುಂದಾಗಿದ್ದಾರೆ.</p>.<p>40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್, ತೊಗರಿ, ಉದ್ದು, ಹೆಸರು ಸೇರಿ ವಿವಿಧ ಬೆಳೆಗಳು ಬಿತ್ತನೆಯಾಗುವ ಸಾಧ್ಯತೆ ಇದೆ. ಬೇಡಿಕೆಗೆ ಅನುಗುಣವಾಗಿ ವಿವಿಧ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿಕೊಳ್ಳಲು ಕೃಷಿ ಇಲಾಖೆ ಕ್ರಮ ವಹಿಸಿದೆ.</p>.<p>ತಾಲ್ಲೂಕಿನಲ್ಲಿ 15 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ರೈತರು ಸರತಿಯಲ್ಲಿ ನಿಂತು ಬಿತ್ತನೆ ಬೀಜ ಪಡೆಯುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ 15000 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜದ ಅಗತ್ಯವಿದೆ. ಸೊಯಾ 12000 ಕ್ವಿಂಟಾಲ್, ತೊಗರಿ 100 ಕ್ವಿಂಟಾಲ್, ಹೆಸರು 20 ಕ್ವಿಂಟಾಲ್, ಉದ್ದು 25 ಕ್ವಿಂಟಾಲ್, ಹಾಗೂ ವಿವಿಧ ಬೆಳೆಗಳು 2855 ಕ್ವಿಂಟಾಲ್ ಬೇಡಿಕೆ ಸಲ್ಲಿಸಿದ್ದು, ಈಗಾಗಲೇ ತಾಲ್ಲೂಕಿಗೆ ಬೇಡಿಗೆ ಇಟ್ಟಷ್ಟು ಬೀಜ ದಾಸ್ತಾನಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.</p>.<h2>‘ಬಿತ್ತನೆಗೆ ಆತುರ ಬೇಡ’</h2><p>‘ರೈತರು ಮುಂಗಾರು ಹಂಗಾಮಿನ ಮಳೆ 80 ಮಿ.ಮೀಟರ್ ಆದ ನಂತರ ಸೊಯಾಬೀನ್ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಮೃಗಶೀರ ಮಳೆ ಜೂ.7ಕ್ಕೆ ಪ್ರಾರಂಭವಾಗಲಿದೆ. ಬಿತ್ತನೆಗೆ ಆತುರದ ನಿರ್ಧಾರ ಕೈಗೊಳ್ಳದೆ ಉತ್ತಮ ಮಳೆಯಾದ ನಂತರ ಭೂಮಿಯ ತೇವಾಂಶ ಗಮನಿಸಿ ಬಿತ್ತನೆ ಕೈಗೊಳ್ಳಬೇಕು. ಸೊಯಾ ಬೀಜಗಳನ್ನು 4 ರಿಂದ 5 ಸೆಂ.ಮೀಟರ್ ಆಳದಲ್ಲಿ ಬಿತ್ತನೆ ಮಾಡಬೇಕು. ರೈತರು ಪಡೆದ ಸೋಯಾಬೀನ್ ಬೀಜದ ಬ್ಯಾಗ್ಗಳನ್ನು ಬಿಸಾಡುವುದು ಅಥವಾ ಎಳೆದುಕೊಂಡು ಹೋಗುವುದು ಮಾಡಬಾರದು. ಸೊಯಾಬೀನ್ ಬ್ಯಾಗ್ಗಳನ್ನು ಸೂಕ್ಷ್ಮವಾಗಿ ಎಚ್ಚರದಿಂದ ತೆಗೆದುಕೊಂಡು ಹೋಗಬೇಕು. ಸೊಯಾಬಿನ್ ಬೆಳೆಗೆ ಡಿಎಪಿ ಗೊಬ್ಬರದ ಬದಲಾಗಿ ಕಾಂಪ್ಲೇಕ್ಸ ಗೊಬ್ಬರ ಬಳಸಬೇಕು. ಇದರಿಂದ ಉತ್ತಮ ಇಳುವರಿ ಪಡೆಯಬಹುದು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.</p>.<div><blockquote>ಕಮಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಯಾವುದೇ ಕೊರತೆ ಇಲ್ಲ. ರೈತರು ಆತಂಕ ಪಡಬೇಕಾಗಿಲ್ಲ </blockquote><span class="attribution">-ಧೂಳಪ್ಪ ಹೊಸಳ್ಳೆ ಸಹಾಯಕ ಕೃಷಿ ನಿರ್ದೇಶಕ ಔರಾದ(ಬಾ)</span></div>.<div><blockquote>ಮಳೆ ಇನ್ನೂ ಆರಂಭವಾಗಿಲ್ಲ. ಜೂನ್ ತಿಂಗಳಿನಲ್ಲಿ ಮಾನ್ಸೂನ್ ಉತ್ತಮ ಮಳೆಯಾದ ನಂತರವೇ ಸೋಯಾಬಿನ್ ತೊಗರಿ ಉದ್ದು ಹೆಸರು ಹಾಗೂ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಬೇಕು </blockquote><span class="attribution">-ಅಂಕುಶ ವಾಡೇಕರ್. ರೈತ ದಾಬಕಾ(ಸಿ)</span></div>.<div><blockquote>ಕೃಷಿ ಇಲಾಖೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ಬಿತ್ತನೆ ಬೀಜ ವಿತರಿಸಬೇಕು. ರೈತರು ಕೂಡಾ ಬಿತ್ತನೆಗೆ ಆತುರ ಮಾಡದೇ ಉತ್ತಮ ಮಳೆಯಾದ ಕೂಡಲೇ ಬಿತ್ತನೆ ಕಾರ್ಯಕೈಗೊಳ್ಳಬೇಕು </blockquote><span class="attribution">-ಪ್ರವೀಣ ಕುಲಕರ್ಣಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ: </strong>ಮಳೆ ನೀರಿಕ್ಷೆಯಲ್ಲಿ ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಇಲಾಖೆ ಸಹ ಬಿತ್ತನೆಗೆ ಬೇಕಾದ ಬೀಜ ಹಾಗೂ ಗೊಬ್ಬರ ಸಂಗ್ರಹಿಸಿ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ.</p>.<p>ಒಂದು ವಾರದ ಹಿಂದೆ ಸುರಿದ ಸಾಧಾರಣ ಮಳೆಯಿಂದ ಕೊಂಚ ಸಮಾಧಾನ ಹೊಂದಿದ ರೈತರು ತಮ್ಮ ಹೊಲಗಳಲ್ಲಿ ಉಳುಮೆ, ಕೊಟ್ಟಿಗೆ ಗೊಬ್ಬರವನ್ನು ಹಾಕುತ್ತಿದ್ದಾರೆ. ಕೆಲವರು ಹೊಲದಲ್ಲಿಯ ಕಸ, ಕಡ್ಡಿಗಳನ್ನು ಆಯ್ದು ಹೊಲ ಸ್ವಚ್ಛ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಜಮೀನು ಹದವಾಗಿಟ್ಟುಕೊಂಡಿರುವ ರೈತರು ಇದೀಗ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಮುಂದಾಗಿದ್ದಾರೆ.</p>.<p>40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್, ತೊಗರಿ, ಉದ್ದು, ಹೆಸರು ಸೇರಿ ವಿವಿಧ ಬೆಳೆಗಳು ಬಿತ್ತನೆಯಾಗುವ ಸಾಧ್ಯತೆ ಇದೆ. ಬೇಡಿಕೆಗೆ ಅನುಗುಣವಾಗಿ ವಿವಿಧ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿಕೊಳ್ಳಲು ಕೃಷಿ ಇಲಾಖೆ ಕ್ರಮ ವಹಿಸಿದೆ.</p>.<p>ತಾಲ್ಲೂಕಿನಲ್ಲಿ 15 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ರೈತರು ಸರತಿಯಲ್ಲಿ ನಿಂತು ಬಿತ್ತನೆ ಬೀಜ ಪಡೆಯುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ 15000 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜದ ಅಗತ್ಯವಿದೆ. ಸೊಯಾ 12000 ಕ್ವಿಂಟಾಲ್, ತೊಗರಿ 100 ಕ್ವಿಂಟಾಲ್, ಹೆಸರು 20 ಕ್ವಿಂಟಾಲ್, ಉದ್ದು 25 ಕ್ವಿಂಟಾಲ್, ಹಾಗೂ ವಿವಿಧ ಬೆಳೆಗಳು 2855 ಕ್ವಿಂಟಾಲ್ ಬೇಡಿಕೆ ಸಲ್ಲಿಸಿದ್ದು, ಈಗಾಗಲೇ ತಾಲ್ಲೂಕಿಗೆ ಬೇಡಿಗೆ ಇಟ್ಟಷ್ಟು ಬೀಜ ದಾಸ್ತಾನಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.</p>.<h2>‘ಬಿತ್ತನೆಗೆ ಆತುರ ಬೇಡ’</h2><p>‘ರೈತರು ಮುಂಗಾರು ಹಂಗಾಮಿನ ಮಳೆ 80 ಮಿ.ಮೀಟರ್ ಆದ ನಂತರ ಸೊಯಾಬೀನ್ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಮೃಗಶೀರ ಮಳೆ ಜೂ.7ಕ್ಕೆ ಪ್ರಾರಂಭವಾಗಲಿದೆ. ಬಿತ್ತನೆಗೆ ಆತುರದ ನಿರ್ಧಾರ ಕೈಗೊಳ್ಳದೆ ಉತ್ತಮ ಮಳೆಯಾದ ನಂತರ ಭೂಮಿಯ ತೇವಾಂಶ ಗಮನಿಸಿ ಬಿತ್ತನೆ ಕೈಗೊಳ್ಳಬೇಕು. ಸೊಯಾ ಬೀಜಗಳನ್ನು 4 ರಿಂದ 5 ಸೆಂ.ಮೀಟರ್ ಆಳದಲ್ಲಿ ಬಿತ್ತನೆ ಮಾಡಬೇಕು. ರೈತರು ಪಡೆದ ಸೋಯಾಬೀನ್ ಬೀಜದ ಬ್ಯಾಗ್ಗಳನ್ನು ಬಿಸಾಡುವುದು ಅಥವಾ ಎಳೆದುಕೊಂಡು ಹೋಗುವುದು ಮಾಡಬಾರದು. ಸೊಯಾಬೀನ್ ಬ್ಯಾಗ್ಗಳನ್ನು ಸೂಕ್ಷ್ಮವಾಗಿ ಎಚ್ಚರದಿಂದ ತೆಗೆದುಕೊಂಡು ಹೋಗಬೇಕು. ಸೊಯಾಬಿನ್ ಬೆಳೆಗೆ ಡಿಎಪಿ ಗೊಬ್ಬರದ ಬದಲಾಗಿ ಕಾಂಪ್ಲೇಕ್ಸ ಗೊಬ್ಬರ ಬಳಸಬೇಕು. ಇದರಿಂದ ಉತ್ತಮ ಇಳುವರಿ ಪಡೆಯಬಹುದು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.</p>.<div><blockquote>ಕಮಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಯಾವುದೇ ಕೊರತೆ ಇಲ್ಲ. ರೈತರು ಆತಂಕ ಪಡಬೇಕಾಗಿಲ್ಲ </blockquote><span class="attribution">-ಧೂಳಪ್ಪ ಹೊಸಳ್ಳೆ ಸಹಾಯಕ ಕೃಷಿ ನಿರ್ದೇಶಕ ಔರಾದ(ಬಾ)</span></div>.<div><blockquote>ಮಳೆ ಇನ್ನೂ ಆರಂಭವಾಗಿಲ್ಲ. ಜೂನ್ ತಿಂಗಳಿನಲ್ಲಿ ಮಾನ್ಸೂನ್ ಉತ್ತಮ ಮಳೆಯಾದ ನಂತರವೇ ಸೋಯಾಬಿನ್ ತೊಗರಿ ಉದ್ದು ಹೆಸರು ಹಾಗೂ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಬೇಕು </blockquote><span class="attribution">-ಅಂಕುಶ ವಾಡೇಕರ್. ರೈತ ದಾಬಕಾ(ಸಿ)</span></div>.<div><blockquote>ಕೃಷಿ ಇಲಾಖೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ಬಿತ್ತನೆ ಬೀಜ ವಿತರಿಸಬೇಕು. ರೈತರು ಕೂಡಾ ಬಿತ್ತನೆಗೆ ಆತುರ ಮಾಡದೇ ಉತ್ತಮ ಮಳೆಯಾದ ಕೂಡಲೇ ಬಿತ್ತನೆ ಕಾರ್ಯಕೈಗೊಳ್ಳಬೇಕು </blockquote><span class="attribution">-ಪ್ರವೀಣ ಕುಲಕರ್ಣಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>