ಮಂಗಳವಾರ, 19 ಮೇ 2026
×
ADVERTISEMENT

ಕಮಲನಗರ: ಹಳ್ಳಿ, ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ!

ಮಹಾದೇವ ಬಿರಾದಾರ
Published : 26 ಏಪ್ರಿಲ್ 2026, 23:58 IST
Last Updated : 27 ಏಪ್ರಿಲ್ 2026, 6:13 IST
ADVERTISEMENT
ಫಾಲೋ ಮಾಡಿ
Comments
ಪ್ರತಿವರ್ಷ ಬೇಸಿಗೆ ಆರಂಭದಲ್ಲಿಯೇ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ
ಗೋಪಾಳ ಜಾಧವ, ಮಾಳೆಗಾಂವ ತಾಂಡಾ ನಿವಾಸಿ
ಮಹಾದೇವ ನಗರ, ಸೋಮಾ ನಾಯಕ, ಧನ ಸಿಂಗ ಹಾಗೂ ರೂಪಲಾನಾಯಕ ತಾಂಡಾಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಸರ್ಕಾರಿ ಶಾಲೆಯ ಕೊಳವೆ ಬಾವಿಯೇ ನಮಗೆ ಆಧಾರ. ಆದರೂ ಅದರಿಂದ ಕೇವಲ 20-30 ಕೊಡ ನೀರು ಮಾತ್ರ ಬರುತ್ತಿದೆ
ಬಾಬುರಾವ ರಾಠೋಡ, ಸೋಮಾನಾಯಕ ತಾಂಡಾ ನಿವಾಸಿ
ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ನೀಡಬೇಕು
ಅಂಕುಶ ವಾಡೇಕರ್, ಸಾಮಾಜಿಕ ಕಾರ್ಯಕರ್ತ
ಕೂಲಿ ನಾಲಿ ಮಾಡಿ ಜೀವನ ಸಾಗಿಸೋ ಕೈಗಳು ಕೊಡ ಹಿಡಿದು ನೀರನ್ನು ಹುಡುಕಿ ಹೊತ್ತೊಯ್ಯುವುದರಲ್ಲಿ ಕಾಲ ಕಳೆಯಬೇಕಾಗಿದೆ
ಅರುಣ ಜಾಧವ, ರೂಪಲಾನಾಯಕ ತಾಂಡಾ ನಿವಾಸಿ
ಮನೆ ಕೆಲಸ ಬಿಟ್ಟು ಬಿಸಿಲಿನಲ್ಲಿ ನೀರಿಗಾಗಿ ಅಲೆದಾಟವೇ ನಮ್ಮ ದಿನಚರಿ. ಕೂಡಲೇ ಟ್ಯಾಂಕರ್ ಅಥವಾ ಹೊಸ ಕೊಳವೆಬಾವಿ ಕಲ್ಪಿಸಬೇಕು
ಜಯಶ್ರೀ ಸುಧಾಮ ಜಾಧವ, ಧನಸಿಂಗನಾಯಕ ತಾಂಡಾ ನಿವಾಸಿ
ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಪರ್ಯಾಯವಾಗಿ ಕೊಳವೆಬಾವಿ ಹಾಗೂ ತೆರೆದ ಬಾವಿ ಬಾಡಿಗೆಯಿಂದ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ
ಮಾರುತಿ ರಾಠೋಡ,ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಔರಾದ್ (ಬಾ)
ಯಾವ್ಯಾವ ಗ್ರಾಮಗಳಲ್ಲಿ ಸಮಸ್ಯೆ?
ತಾಲ್ಲೂಕಿನಲ್ಲಿ ಸುಮಾರು 54 ಹಳ್ಳಿಗಳಿದ್ದು, ಅವುಗಳಲ್ಲಿ ಕನಿಷ್ಠ 14ಕ್ಕೂ ಹೆಚ್ಚು ಹಳ್ಳಿಗಳು ಮತ್ತು ತಾಂಡಾಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಮಾಳೆಗಾಂವ ತಾಂಡಾ, ಸೇವಾದಾಸನಗರ, ಮಹಾದೇವನಗರ, ರೂಪಲಾನಾಯಕ, ಧನಸಿಂಗ ತಾಂಡಾ, ಹಂದಿಕೇರ, ವಾಗನಗೇರಾವಾಡಿ, ಡೋಣಗಾಂವವಾಡಿ, ಚಿಕ್ಲಿ(ಯು), ಸೊಸೈಟಿ ತಾಂಡಾ, ಕಾರಬಾರಿ ತಾಂಡಾ, ಮುತಖೇಡ, ದಾಸಾನಾಯಕ ತಾಂಡಾ ಹಾಗೂ ಕೋರಿಯಾಳ ಗ್ರಾಮಗಳಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಿದರೂ ಸಮಸ್ಯೆ ಮುಂದುವರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT