<p><strong>ಕಮಲನಗರ</strong>: ತಾಲ್ಲೂಕಿನ ಸೋನಾಳ ಗ್ರಾಮದ ವಾರ್ಡ್ ನಂ 1ರಲ್ಲಿ ಗ್ರಾಮಸ್ಥರು ಕಳೆದ 15 ದಿನದಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳಿಗೆ ಸುಡುವ ಬಿಸಿಲಿನಲ್ಲಿ ನೀರು ತರುವುದೇ ಒಂದು ದೊಡ್ಡ ಕಾಯಕವಾಗಿ ಪರಿಣಮಿಸಿದೆ.</p>.<p>ಪ್ರತಿದಿನ ದುಡಿದು ಜೀವನ ಸಾಗಿಸುವ ಅನಿವಾರ್ಯತೆ ಕುಟುಂಬ ಕ್ಕಿದ್ದರೂ, ನೀರಿಗಾರಿ ಕೆಲಸವನ್ನು ಬಿಟ್ಟು ಮಹಿಳೆಯರು ಅಲೆದಾಡುತ್ತಿದ್ದಾರೆ. ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಸಾಕಷ್ಟು ತೊಂದರೆ ಗಳಾಗುತ್ತಿದ್ದರೂ ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.</p>.<p>ಬಡಾವಣೆ ಯಲ್ಲಿ ಕೊರೆಸಿರುವ ಕೊಳವೆ ಬಾವಿ ಇದ್ದರೂ ಯಾವುದೇ ಪ್ರಯೋಜನ ಇಲ್ಲ ದಂತಾಗಿದೆ. ಕೊಳವೆಬಾವಿ ಮೋಟಾರ್ ಹಾಳಾಗಿದ್ದು, ಈವರೆಗೆ ದುರಸ್ತಿ ಮಾಡಿಸಿಲ್ಲ. ಗ್ರಾಮದ ವಾರ್ಡ್–1ರ ನಿವಾಸಿಗಳು ಇದೇ ಕೊಳವೆ ಬಾವಿಯನ್ನು ಅವಲಂಬಿಸಿದ್ದು, ಸಧ್ಯ ನೀರು ಸಿಗದೆ ಬೇರೆ ಕಡೆಗಳಲ್ಲಿ ಅಲೆದಾಡುತ್ತಿದ್ದಾರೆ.</p>.<p>ಗ್ರಾಮ ಪಂಚಾಯಿತಿ ಪಿಡಿಒ ಇತ್ತ ಗಮನ ಹರಿಸಿ ಕೊಳವೆ ಬಾವಿಯ ಮೋಟಾರ್ ದುರುಸ್ತಿ ಮಾಡಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಬಡಾವಣೆಯ ನಾಗರಿಕ ಪವನ ಪಾಟೀಲ, ಗುಂಡಪ್ಪ ಬಿರ್ಗೆ, ರವಿ ಶೀಲವಂತ, ಸಂಭಾ ಬಿರ್ಗೆ, ಮಾರುತಿ ಮಾನೆ, ವಿನೋದ ಆಳಂದೆ, ಪ್ರಭಾವತಿ ಧನರಾಜ, ಭಾರತಾಬಾಯಿ ಒತ್ತಾಯಿಸಿದ್ದಾರೆ.</p>.<p>ಒಂದು ವೇಳೆ ವಿಳಂಬ ಮಾಡಿದರೆ ಪಂಚಾಯತಿ ಎದುರು ನೀರಿಗಾಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.</p>.<div><blockquote>ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿದ್ದು, ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.</blockquote><span class="attribution">– ಅಂಕುಶ ಹಣಮಶೇಟ್ಟೆ, ಗ್ರಾಪಂ ಮಾಜಿ ಸದಸ್ಯ</span></div>.<div><blockquote>ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿದ್ದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಶೀಘ್ರದಲ್ಲಿ ಕೊಳವೆ ಬಾವಿಯ ಮೋಟಾರ್ ರಿಪೇರಿ ಮಾಡಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು.</blockquote><span class="attribution">– ಗುಂಡಪ್ಪ ಬಿರ್ಗೆ, ಬಡಾವಣೆಯ ನಿವಾಸಿ</span></div>.<div><blockquote>ವಾರ್ಡ್ ನಂ1ರಲ್ಲಿಯ ಕೊಳವೆ ಬಾವಿಯ ಮೋಟಾರ್ ದುರಸ್ತಿಗೆ ಕೊಟ್ಟಿದ್ದೇವೆ. ಎರಡು ದಿನಗಳಲ್ಲಿ ಕೊಳವೆ ಬಾವಿಗೆ ಮೋಟಾರ್ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು. </blockquote><span class="attribution">– ಶೇಷಪ್ಪಾ, ಪಿಡಿಒ ಸೋನಾಳ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260526-33-395343008</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ</strong>: ತಾಲ್ಲೂಕಿನ ಸೋನಾಳ ಗ್ರಾಮದ ವಾರ್ಡ್ ನಂ 1ರಲ್ಲಿ ಗ್ರಾಮಸ್ಥರು ಕಳೆದ 15 ದಿನದಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳಿಗೆ ಸುಡುವ ಬಿಸಿಲಿನಲ್ಲಿ ನೀರು ತರುವುದೇ ಒಂದು ದೊಡ್ಡ ಕಾಯಕವಾಗಿ ಪರಿಣಮಿಸಿದೆ.</p>.<p>ಪ್ರತಿದಿನ ದುಡಿದು ಜೀವನ ಸಾಗಿಸುವ ಅನಿವಾರ್ಯತೆ ಕುಟುಂಬ ಕ್ಕಿದ್ದರೂ, ನೀರಿಗಾರಿ ಕೆಲಸವನ್ನು ಬಿಟ್ಟು ಮಹಿಳೆಯರು ಅಲೆದಾಡುತ್ತಿದ್ದಾರೆ. ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಸಾಕಷ್ಟು ತೊಂದರೆ ಗಳಾಗುತ್ತಿದ್ದರೂ ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.</p>.<p>ಬಡಾವಣೆ ಯಲ್ಲಿ ಕೊರೆಸಿರುವ ಕೊಳವೆ ಬಾವಿ ಇದ್ದರೂ ಯಾವುದೇ ಪ್ರಯೋಜನ ಇಲ್ಲ ದಂತಾಗಿದೆ. ಕೊಳವೆಬಾವಿ ಮೋಟಾರ್ ಹಾಳಾಗಿದ್ದು, ಈವರೆಗೆ ದುರಸ್ತಿ ಮಾಡಿಸಿಲ್ಲ. ಗ್ರಾಮದ ವಾರ್ಡ್–1ರ ನಿವಾಸಿಗಳು ಇದೇ ಕೊಳವೆ ಬಾವಿಯನ್ನು ಅವಲಂಬಿಸಿದ್ದು, ಸಧ್ಯ ನೀರು ಸಿಗದೆ ಬೇರೆ ಕಡೆಗಳಲ್ಲಿ ಅಲೆದಾಡುತ್ತಿದ್ದಾರೆ.</p>.<p>ಗ್ರಾಮ ಪಂಚಾಯಿತಿ ಪಿಡಿಒ ಇತ್ತ ಗಮನ ಹರಿಸಿ ಕೊಳವೆ ಬಾವಿಯ ಮೋಟಾರ್ ದುರುಸ್ತಿ ಮಾಡಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಬಡಾವಣೆಯ ನಾಗರಿಕ ಪವನ ಪಾಟೀಲ, ಗುಂಡಪ್ಪ ಬಿರ್ಗೆ, ರವಿ ಶೀಲವಂತ, ಸಂಭಾ ಬಿರ್ಗೆ, ಮಾರುತಿ ಮಾನೆ, ವಿನೋದ ಆಳಂದೆ, ಪ್ರಭಾವತಿ ಧನರಾಜ, ಭಾರತಾಬಾಯಿ ಒತ್ತಾಯಿಸಿದ್ದಾರೆ.</p>.<p>ಒಂದು ವೇಳೆ ವಿಳಂಬ ಮಾಡಿದರೆ ಪಂಚಾಯತಿ ಎದುರು ನೀರಿಗಾಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.</p>.<div><blockquote>ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿದ್ದು, ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.</blockquote><span class="attribution">– ಅಂಕುಶ ಹಣಮಶೇಟ್ಟೆ, ಗ್ರಾಪಂ ಮಾಜಿ ಸದಸ್ಯ</span></div>.<div><blockquote>ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿದ್ದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಶೀಘ್ರದಲ್ಲಿ ಕೊಳವೆ ಬಾವಿಯ ಮೋಟಾರ್ ರಿಪೇರಿ ಮಾಡಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು.</blockquote><span class="attribution">– ಗುಂಡಪ್ಪ ಬಿರ್ಗೆ, ಬಡಾವಣೆಯ ನಿವಾಸಿ</span></div>.<div><blockquote>ವಾರ್ಡ್ ನಂ1ರಲ್ಲಿಯ ಕೊಳವೆ ಬಾವಿಯ ಮೋಟಾರ್ ದುರಸ್ತಿಗೆ ಕೊಟ್ಟಿದ್ದೇವೆ. ಎರಡು ದಿನಗಳಲ್ಲಿ ಕೊಳವೆ ಬಾವಿಗೆ ಮೋಟಾರ್ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು. </blockquote><span class="attribution">– ಶೇಷಪ್ಪಾ, ಪಿಡಿಒ ಸೋನಾಳ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260526-33-395343008</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>