ಕಮಲನಗರ : ತಾಲ್ಲೂಕಿನಾದ್ಯಂತ ರೈತರು ಸಂಭ್ರಮದಿಂದ ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಿದರು.
ಕಳೆದ ಸಾಲಿನಲ್ಲಿ ಎಳ್ಳಮಾವಾಸ್ಯೆ ಹಬ್ಬ ಆಚರಿಸಲಾಗಿತ್ತು. ಈ ವರ್ಷ ಡಿಸೆಂಬರ್ ತಿಂಗಳನಲ್ಲಿಯೇ ವಿಶೇಷವಾಗಿ ದಿಸೆಂಬರ್ 25 ಕ್ರಿಸ್ಮಸ್ ಹಬ್ಬದಂದೇ ಬಂದಿದು ವಿಶೇಷವಾಗಿತ್ತು.
ಹಬ್ಬದ ನಿಮಿತ್ತ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ರೈತರು ತಮ್ಮ ಹೊಲಗಳಿಗೆ ಬುತ್ತಿ ತೆಗೆದುಕೊಂಡು ದೇವರಿಗೆ,ಭೂತಾಯಿಗೆ ನೈವೇದ್ಯ ಅರ್ಪಿಸಿ ಭೋಜನ ಮಾಡುವು ದರೊಂದಿಗೆ ಹಬ್ಬದ ಸಂಭ್ರಮ ಆಚರಿಸಿದರು.
ಗೆಳೆಯರು, ಮಕ್ಕಳು ಸೇರಿ ಹೊಲದಲ್ಲಿ ಗಾಳಿಪಟ ಹಾರಿಸಿದರು. ಮಹಿಳೆಯರು ಜೋಕಾಲಿ ಆಡಿ ಸಂಭ್ರಮಿಸಿದರು. ಬರದ ನಡುವೆಯೂ ರೈತರ ಸಂಭ್ರಮ ಕಂಡು ಬಂದಿತು.