<p><strong>ಔರಾದ್:</strong> ‘ಕನ್ನಡ ಭಾಷೆ ಪ್ರಾಚೀನ ಹಾಗೂ ಶ್ರೀಮಂತ ಭಾಷೆಯಾಗಿದೆ’ ಎಂದು ಮುಖ್ಯ ಶಿಕ್ಷಕ ಶಿವಕುಮಾರ ಹಿರೇಮಠ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಸಂತಪುರ ಅನುಭವ ಮಂಟಪ ಗುರುಕುಲ ಹಾಗೂ ಸಿದ್ಧರಾಮೇಶ್ವರ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ಕನ್ನಡ ಹೆಮ್ಮೆಯ ಭಾಷೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ತಿಳಿಸಿದರು.</p>.<p>ಶಿಕ್ಷಕ ಮಾರುತಿ ಗಾದಗೆ ಕನ್ನಡ ಕವಿಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.</p>.<p>ಪ್ರಾಂಶುಪಾಲ ನವೀಲಕುಮಾರ ಉತ್ಕಾರ್,‘ಕನ್ನಡದಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಪಾಸಾಗಿದ್ದಾರೆ’ ಎಂದರು.</p>.<p>ಉಪನ್ಯಾಸಕ ಭೂಷಣ ಪಾಟೀಲ ಮಾತನಾಡಿದರು. ಶಿವಪುತ್ರ ಧರಣೆ ಸ್ವಾಗತಿಸಿದರು. ಕಲ್ಲಪ್ಪ ಬುಟ್ಟೆ ನಿರೂಪಿಸಿದರು. ಸರಸ್ವತಿ ಜುಲಾಂಡೆ ವಂದಿಸಿದರು. ಶಿಕ್ಷಕ ಸಂಗಮೇಶ ಬ್ಯಾಳೆ, ನೀಲಾಂಬಿಕಾ ಕಾಂಬಳೆ, ನಾಗರತ್ನಗೌಡ, ನಾಗರಾಜ ಬಂಬುಳಗೆ, ಉಮಾಕಾಂತ ಮುಗುಟೆ ಹಾಗೂ ವಿಜಯಕುಮಾರ ಪಾಟೀಲ ಉಪಸ್ಥಿತರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಔರಾದ್:</strong> ‘ಕನ್ನಡ ಭಾಷೆ ಪ್ರಾಚೀನ ಹಾಗೂ ಶ್ರೀಮಂತ ಭಾಷೆಯಾಗಿದೆ’ ಎಂದು ಮುಖ್ಯ ಶಿಕ್ಷಕ ಶಿವಕುಮಾರ ಹಿರೇಮಠ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಸಂತಪುರ ಅನುಭವ ಮಂಟಪ ಗುರುಕುಲ ಹಾಗೂ ಸಿದ್ಧರಾಮೇಶ್ವರ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ಕನ್ನಡ ಹೆಮ್ಮೆಯ ಭಾಷೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ತಿಳಿಸಿದರು.</p>.<p>ಶಿಕ್ಷಕ ಮಾರುತಿ ಗಾದಗೆ ಕನ್ನಡ ಕವಿಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.</p>.<p>ಪ್ರಾಂಶುಪಾಲ ನವೀಲಕುಮಾರ ಉತ್ಕಾರ್,‘ಕನ್ನಡದಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಪಾಸಾಗಿದ್ದಾರೆ’ ಎಂದರು.</p>.<p>ಉಪನ್ಯಾಸಕ ಭೂಷಣ ಪಾಟೀಲ ಮಾತನಾಡಿದರು. ಶಿವಪುತ್ರ ಧರಣೆ ಸ್ವಾಗತಿಸಿದರು. ಕಲ್ಲಪ್ಪ ಬುಟ್ಟೆ ನಿರೂಪಿಸಿದರು. ಸರಸ್ವತಿ ಜುಲಾಂಡೆ ವಂದಿಸಿದರು. ಶಿಕ್ಷಕ ಸಂಗಮೇಶ ಬ್ಯಾಳೆ, ನೀಲಾಂಬಿಕಾ ಕಾಂಬಳೆ, ನಾಗರತ್ನಗೌಡ, ನಾಗರಾಜ ಬಂಬುಳಗೆ, ಉಮಾಕಾಂತ ಮುಗುಟೆ ಹಾಗೂ ವಿಜಯಕುಮಾರ ಪಾಟೀಲ ಉಪಸ್ಥಿತರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>