ರೈತರು ಶನಿವಾರ ರಾತ್ರಿಯೇ ಹೊನ್ನುಹುಗ್ಗಿ ಕುಟ್ಟಿ, ವಿಶೇಷವಾಗಿ ಸಿಹಿ ಚಟ್ನಿ ತಯಾರಿಸಿ ರಾಸುಗಳಿಗೆ ನೀಡಿದರು. ಬೆಳಿಗ್ಗೆ ಮಹಿಳೆಯರು ಮನೆ ಸ್ವಚ್ಛಗೊಳಿಸಿದರು. ರೈತರು ಎತ್ತುಗಳ ಕೊಂಬಿಗೆ ಬಣ್ಣ ಬಳಿದರು. ಹೊಸ ದಾರದಿಂದ ತಯಾರಿಸಿದ ಮೊಗರಾಣಿ, ಗೊಂಡೆ, ಟೊಂಕದ ದಾರವನ್ನು ಎತ್ತುಗಳಿಗೆ ಹಾಕಿ ಅಲಂಕರಿಸಿ ಸಂತಸಪಟ್ಟರು. ಕೊರಳಲ್ಲಿ ಗೆಜ್ಜೆ ಸರ ಹಾಗೂ ವಿವಿಧ ರೀತಿಯ ಅಲಂಕಾರಿಕ ವಸ್ತುಗಳನ್ನು ಹಾಕಿದರು. ಕೃಷಿ ಚಟುವಟಿಕೆಯ ಕೂರಿಗೆ, ಕುಂಟಿ, ಬುಕ್ಕಾ ಹಗ್ಗ, ಮಂಡಿ, ನೊಗ ಸೇರಿದಂತೆ ಇನ್ನಿತರ ಎಲ್ಲ ಸಾಮಾಗ್ರಿಗಳನ್ನು ಪೂಜೆ ಸಲ್ಲಿಸಿದರು.