ಬೀದರ್: ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಮುಂಬೈನಿಂದ ಬೀದರ್ಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ರೈಲು ಮೇ 10ರಂದು ಮಧ್ಯಾಹ್ನ 1.50ಕ್ಕೆ ಭಾಲ್ಕಿ ಹಾಗೂ ಮಧ್ಯಾಹ್ನ 2.20ಕ್ಕೆ ಬೀದರ್ಗೆ ಬರಲಿದೆ. ಸಂಜೆ 6.35ಕ್ಕೆ ಹೈದರಾಬಾದ್ಗೆ ತಲುಪಲಿದೆ.
ರಾತ್ರಿ 8.30ಕ್ಕೆ ಹೈದರಾಬಾದ್ನಿಂದ ಹೊರಟು, ರಾತ್ರಿ 11.45ಕ್ಕೆ ಬೀದರ್ ಬರಲಿದೆ. ರಾತ್ರಿ 12.30ಕ್ಕೆ ಭಾಲ್ಕಿ ತಲುಪಲಿದೆ. ಬಳಿಕ ಬಂದ ಮಾರ್ಗವಾಗಿ ಮುಂಬೈಗೆ ತೆರಳಲಿದೆ ಎಂದು ಹೇಳಿದ್ದಾರೆ.
₹ 4,47 ಲಕ್ಷ ನಗದು, ಅಕ್ರಮ ಮದ್ಯ ವಶ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಪೊಲೀಸರು ₹ 15,298 ಮೌಲ್ಯದ 57.16 ಲೀಟರ್ ಮದ್ಯ ಹಾಗೂ ಅಬಕಾರಿ ಅಧಿಕಾರಿಗಳು ₹ 19,763 ಮೌಲ್ಯದ 48.87 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ದಾಖಲೆಗಳಿಲ್ಲದೇ ವಾಹನಗಳಲ್ಲಿ ಸಾಗಿಸುತ್ತಿದ್ದ ₹ 4,47 ಲಕ್ಷ ನಗದು ಸ್ಟಾಟಿಕ್ ಸರ್ವೇಲೆನ್ಸ್ ತಂಡ ವಶಪಡಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.