ಕೆಲ ವರ್ಷಗಳ ಹಿಂದೆ ಗ್ರಾಮಕ್ಕೆ ರಸ್ತೆ ಇಲ್ಲ, ತಿರುವಿನಲ್ಲಿ ಸೇತುವೆ ಸಮಸ್ಯೆ ಇದೆ. ಹಾಗಾಗಿ, ಬಸ್ ಬಿಡಲು ಆಗುವುದಿಲ್ಲ ಎಂದು ಹೇಳಿದ್ದ ಅಧಿಕಾರಿಗಳು ನಂತರ ರಸ್ತೆ, ಸೇತುವೆ ಕಾರ್ಯ ಪೂರ್ಣಗೊಂಡ ನಂತರ ಕೇವಲ ಎರಡು ತಿಂಗಳು ಮಾತ್ರ ಬಸ್ ಓಡಿಸಿದ್ದಾರೆ. ನಂತರ ಬರಲೇ ಇಲ್ಲ. ಜನಪ್ರತಿನಿಧಿ, ಅಧಿಕಾರಿಗಳು ಬದ್ಧತೆ ಪ್ರದರ್ಶಿಸಿ ವಿದ್ಯಾರ್ಥಿಗಳ, ಗ್ರಾಮಸ್ಥರ ಹಿತದೃಷ್ಟಿಯಿಂದ ಏನೇ ಸಮಸ್ಯೆ ಇದ್ದರೂ ಪರಿಹರಿಸಿ ಗ್ರಾಮಕ್ಕೆ ನಿತ್ಯ ಶಾಲಾ ಸಮಯದಲ್ಲಿ ಬಸ್ ಸಂಚರಿಸುವಂತೆ ನೋಡಿಕೊಳ್ಳಬೇಕು ಎಂದು ಪಾಲಕರು ಒತ್ತಾಯಿಸುತ್ತಾರೆ.