‘ಪ್ರತಿಯೊಬ್ಬರ ಕೌಶಲ ಗುರುತಿಸಿ ಪ್ರೋತ್ಸಾಹಿಸಿ ಕಾಯಕ ಘನತೆ ನೆಲೆಗೊಳಿಸಿದರು. ಅದರ ಫಲವಾಗಿ ಬೀದರ್ ಜಿಲ್ಲೆಯ ರೇಕುಳಗಿಯ ಶರಣ ಬಹುರೂಪಿ ಚೌಡಯ್ಯನವರು ಬಹುರೂಪಗಳನ್ನು ಧರಿಸಿ ಜನರನ್ನು ನಗಿಸುವುದೇ ಕಾಯಕವಾಗಿ ಸ್ವೀಕರಿಸಿದ್ದರು. ವಿಧವಿಧವಾದ ವೇಷಗಳನ್ನು ಧರಿಸಿ ಹಾಡಿ-ಹಾಡಿ, ಕುಣಿದು-ಕುಣಿದು ಜನರನ್ನು ರಂಜಿಸುತ್ತಲೇ ಅನುಭವ ಮಂಟಪದ ವಿದ್ಯಾಮಾನಗಳನ್ನು ಬಿತ್ತರಿಸುತ್ತಿದ್ದರು. ಆತ್ಮವಿದ್ಯೆಯ ದಾರಿ ತೋರುತ್ತಿದ್ದರು. ಅವರು ಬಹುರೂಪ ಆಡುತ್ತಿದ್ದರೇ ಪುರವೆಲ್ಲ ಮೈಮರೆತು ನೋಡಿ ಆನಂದಿಸುತ್ತಿದ್ದರು’ ಎಂದು ಹೇಳಿದರು.