<p><strong>ಬೀದರ್</strong>: ‘ನಗುವುದರಿಂದ ಮನುಷ್ಯನ ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ’ ಎಂದು ಮುಂಡರಗಿ ತೋಟದಾರ್ಯ ಮಠದ ನಿಜಗುಣಪ್ರಭು ಸ್ವಾಮೀಜಿ ತಿಳಿಸಿದರು.</p>.<p>ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಶರಣ ಸಂಗಮ, ನಗೆಮಾರಿ ತಂದೆಗಳ ಸ್ಮರಣೋತ್ಸವ ಮತ್ತು ನಗೆಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ. ಬೇರೆಯವರ ನಗುವನ್ನು ಕೇಳಿಸಿಕೊಂಡು ನಗುವುದು ಅತಿಶಯವಾದ ಧರ್ಮ. ನಗುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆದಕಾರಣ ಪ್ರತಿಯೊಬ್ಬರೂ ಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.</p>.<p>ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ, ‘ನಗಿಸುವುದು ಅಸಾಮಾನ್ಯ ಕಲೆ. ನಗುವ ಸಾಮರ್ಥ್ಯ ಇರುವುದು ಮನುಷ್ಯನಿಗೆ ಮಾತ್ರ. 12ನೇ ಶತಮಾನದ ನಗೆ ಮಾರಿ ತಂದೆಯವರು ಜನರನ್ನು ನಗಿಸುತ್ತಲೇ ಸುಂದರ ಬದುಕಿನ ತತ್ವಗಳನ್ನು ಸಾರುವುದು ಕಾಯಕವಾಗಿಸಿಕೊಂಡಿದ್ದರು. ಬಿಗುಮಾನ, ಅಹಂಕಾರ, ಇನ್ನೊಬ್ಬರ ಮನ ನೋಯಿಸದಂತೆ ಮನಸ್ಸು ಪೂರ್ತಿ ನಗುವುದರಿಂದ ಒತ್ತಡ ನಿವಾರಣೆಯಾಗಿ ಆನಂದ ಲಭಿಸುತ್ತದೆ’ ಎಂದರು.</p>.<p>ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು. ಬೀದರ್ ಮಹಾನಗರ ಪಾಲಿಕೆ ಉಪಮೇಯರ್ ಲಕ್ಷ್ಮೀಬಾಯಿ ಹಂಗರಗಿ ಉದ್ಘಾಟಿಸಿದರು. ಶರಣಬಸವ ಚಕುರ್ತೆ ಧ್ವಜಾರೋಹಣಗೈದರು. ದಶಪ್ಪ ಬೊರಗೊಂಡೆ ಉಪಸ್ಥಿತರಿದ್ದರು. ಅಲ್ಲಮಪ್ರಭು ಮಹಿಳಾ ಭಜನಾ ಮಂಡಳದವರು ವಚನ ಭಜನೆ ನಡೆಸಿಕೊಟ್ಟರು. ನಾಗೇಶ್ವರಿ ಮಾನಕಾರಿ ಭಕ್ತಿ ದಾಸೋಹಗೈದರು. ಶರಣಮ್ಮ ಪವಾಡಶೆಟ್ಟಿ ನಿರೂಪಿಸಿದರು.</p>.<p>ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಹಾಗೂ ಪಾಪನಾಶ ನಗೆಕೂಟದವರು ಗಂಡ ಹೆಂಡತಿ, ಮಕ್ಕಳು, ಶಿಕ್ಷಕರು, ಗೆಳೆಯರ ಮಧ್ಯೆ ನಡೆಯುವ ಹಾಸ್ಯ ಪ್ರಸಂಗಗಳು ಹಾಗೂ ಮಿಮಿಕ್ರಿಗಳ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ನಗುವುದರಿಂದ ಮನುಷ್ಯನ ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ’ ಎಂದು ಮುಂಡರಗಿ ತೋಟದಾರ್ಯ ಮಠದ ನಿಜಗುಣಪ್ರಭು ಸ್ವಾಮೀಜಿ ತಿಳಿಸಿದರು.</p>.<p>ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಶರಣ ಸಂಗಮ, ನಗೆಮಾರಿ ತಂದೆಗಳ ಸ್ಮರಣೋತ್ಸವ ಮತ್ತು ನಗೆಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ. ಬೇರೆಯವರ ನಗುವನ್ನು ಕೇಳಿಸಿಕೊಂಡು ನಗುವುದು ಅತಿಶಯವಾದ ಧರ್ಮ. ನಗುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆದಕಾರಣ ಪ್ರತಿಯೊಬ್ಬರೂ ಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.</p>.<p>ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ, ‘ನಗಿಸುವುದು ಅಸಾಮಾನ್ಯ ಕಲೆ. ನಗುವ ಸಾಮರ್ಥ್ಯ ಇರುವುದು ಮನುಷ್ಯನಿಗೆ ಮಾತ್ರ. 12ನೇ ಶತಮಾನದ ನಗೆ ಮಾರಿ ತಂದೆಯವರು ಜನರನ್ನು ನಗಿಸುತ್ತಲೇ ಸುಂದರ ಬದುಕಿನ ತತ್ವಗಳನ್ನು ಸಾರುವುದು ಕಾಯಕವಾಗಿಸಿಕೊಂಡಿದ್ದರು. ಬಿಗುಮಾನ, ಅಹಂಕಾರ, ಇನ್ನೊಬ್ಬರ ಮನ ನೋಯಿಸದಂತೆ ಮನಸ್ಸು ಪೂರ್ತಿ ನಗುವುದರಿಂದ ಒತ್ತಡ ನಿವಾರಣೆಯಾಗಿ ಆನಂದ ಲಭಿಸುತ್ತದೆ’ ಎಂದರು.</p>.<p>ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು. ಬೀದರ್ ಮಹಾನಗರ ಪಾಲಿಕೆ ಉಪಮೇಯರ್ ಲಕ್ಷ್ಮೀಬಾಯಿ ಹಂಗರಗಿ ಉದ್ಘಾಟಿಸಿದರು. ಶರಣಬಸವ ಚಕುರ್ತೆ ಧ್ವಜಾರೋಹಣಗೈದರು. ದಶಪ್ಪ ಬೊರಗೊಂಡೆ ಉಪಸ್ಥಿತರಿದ್ದರು. ಅಲ್ಲಮಪ್ರಭು ಮಹಿಳಾ ಭಜನಾ ಮಂಡಳದವರು ವಚನ ಭಜನೆ ನಡೆಸಿಕೊಟ್ಟರು. ನಾಗೇಶ್ವರಿ ಮಾನಕಾರಿ ಭಕ್ತಿ ದಾಸೋಹಗೈದರು. ಶರಣಮ್ಮ ಪವಾಡಶೆಟ್ಟಿ ನಿರೂಪಿಸಿದರು.</p>.<p>ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಹಾಗೂ ಪಾಪನಾಶ ನಗೆಕೂಟದವರು ಗಂಡ ಹೆಂಡತಿ, ಮಕ್ಕಳು, ಶಿಕ್ಷಕರು, ಗೆಳೆಯರ ಮಧ್ಯೆ ನಡೆಯುವ ಹಾಸ್ಯ ಪ್ರಸಂಗಗಳು ಹಾಗೂ ಮಿಮಿಕ್ರಿಗಳ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>