ನವದೆಹಲಿ: ದೇಶದ ವಿವಿಧ ನಗರಗಳಲ್ಲಿ ಎಟಿಎಂನಲ್ಲಿ ನಗದು ಕೊರತೆ ಕಂಡುಬಂದಿದ್ದು, ಜನರು ದುಡ್ಡಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಎಟಿಎಂಗಳಲ್ಲಿ ದುಡ್ಡಿಲ್ಲ ಎಂದು ಜನರು ಗೋಳಿಡುತ್ತಿದ್ದು, ಈ ಸಮಸ್ಯೆ ತಾತ್ಕಾಲಿಕ ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.