ತಂತ್ರಜ್ಞಾನಗಳು ಮಾನವನ ಒಳಿತಿಗಾಗಿ ಇವೆಯೇ ಹೊರತು ಹಾಳು ಮಾಡುವುದಕ್ಕಲ್ಲ. ಹೀಗಾಗಿ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇಂದಿನ ಯುವಕರು ಮೊಬೈಲ್, ಟಿವಿಗಳಲ್ಲೇ ಮುಳುಗಿ ಹೋಗಿದ್ದಾರೆ. ಹೆತ್ತವರು, ಸಮಾಜವನ್ನೂ ಮರೆತಿದ್ದಾರೆ. ಬಹಳ ಒತ್ತಡದಲ್ಲಿ ಇದ್ದಾರೆ. ಯುವ ಪೀಳಿಗೆ ಕಷ್ಟಕ್ಕೆ ಹೆದರುತ್ತಿದ್ದಾರೆ. ವಿಚಲಿತರಾಗುತ್ತಿದ್ದಾರೆ. ಕಾರಣ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
ಯುವಕರು ಜೀವನದಲ್ಲಿ ಶಿಸ್ತು, ಸಂಯಮ, ಒಳ್ಳೆಯ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಜನನಿ, ಜನ್ಮಭೂಮಿಯನ್ನು ಗೌರವಿಸಬೇಕು. ಪ್ರಕೃತಿಯನ್ನು ಪ್ರೀತಿಸಬೇಕು ಎಂದು ಹೇಳಿದರು.
ಅನೇಕ ಹಾಸ್ಯ ಚಟಾಕಿಗಳನ್ನು ಹಾರಿಸಿ ನೆರೆದಿದ್ದ ಮಕ್ಕಳು, ಯುವಕರು, ಪಾಲಕರು ಹಾಗೂ ಶಿಕ್ಷಕರು ನಕ್ಕು ನಲಿಯುವಂತೆ ಮಾಡಿದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಜನಸೇವಾ ಪ್ರತಿಷ್ಠಾನದ ವತಿಯಿಂದ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.