'ಕಳೆದ ವರ್ಷ ಮಳೆ ಕೊರತೆಯಾಗಿ ತೊಗರಿ, ಸೋಯಾ, ಜೋಳದಂತಹ ಸಾಂಪ್ರದಾಯಿಕ ಬೆಳೆ ಸರಿಯಾಗಿ ಬಾರದೆ ಹಾನಿ ಅನುಭವಿಸಿದ್ದೆ. ಗೆಳೆಯರೊಬ್ಬರ ಸಲಹೆ ಮೇರೆಗೆ ₹ 5 ಲಕ್ಷ ಖರ್ಚು ಮಾಡಿ ಕೊಳವೆ ಬಾವಿ ತೋಡಿಸಿ, ಹಣ್ಣು, ತರಕಾರಿ ಬೆಳೆಯಲು ಆರಂಭಿಸಿದೆ. ಆರಂಭದ ವರ್ಷಗಳಲ್ಲಿ ಕೈತುಂಬ ಹಣ ಬಂತು. ಆದರೆ ಈ ವರ್ಷ ಲಾಕ್ಡೌನ್ನಿಂದಾಗಿ ಎಲ್ಲವೂ ಹಾಳಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ' ಎಂದು ರೈತ ರೆಡ್ಡಿ ದುಃಖ ವ್ಯಕ್ತಪಡಿಸಿದರು.