ತೆಂಗಿನಕಾಯಿ, ಕರ್ಪೂರ, ಊದುಬತ್ತಿ, ವಿಭೂತಿ, ಹೂವು, ಬಿಲ್ವಪತ್ರೆ, ಬೆಂಡು ಬತಾಸು, ಅಳ್ಳು, ಬರ್ಫಿ, ಖವಾ, ಮಕ್ಕಳ ಆಟಿಕೆ, ತಂಪುಪಾನೀಯ, ಹಣ್ಣು ಮೊದಲಾದ ತಾತ್ಕಾಲಿಕ ಅಂಗಡಿಗಳು ತೆರೆದುಕೊಂಡಿದ್ದವು. ಭಕ್ತರು ಮಳಿಗೆಗಳಿಗೆ ತೆರಳಿ ತಮಗೆ ಬೇಕಿರುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಮಂದಿರದ ಪರಿಸರದಲ್ಲಿ ಜಾತ್ರೆ ವಾತಾವರಣ ನಿರ್ಮಾಣವಾಗಿತ್ತು.