ಜೀವನಕ್ಕೆ ಸಂಬಂಧವಿಲ್ಲದ ಯಾವುದೇ ವೈಚಾರಿಕವಾದ ಬಸವಣ್ಣನವರ ತತ್ವಜ್ಞಾನದಲ್ಲಿ ಕಂಡು ಬರಲಾರವು ಸಮಾಜದ ಎಲ್ಲ ವರ್ಗದ ಜನಮಾನಸದಲ್ಲಿ ಕಾಯಕದ ಬಗ್ಗೆ ನಿಷ್ಠೆ, ವೈಯಕ್ತಿಕ ಜೀವನದಲ್ಲಿ ಪರಿಶುದ್ಧ ಆಚರಣೆ ಮತ್ತೇ ವಂಚಿತರಿಗೆ ಸಹಾಯ ಮಾಡುವ ಬುದ್ಧಿಯನ್ನು ಪ್ರತ್ಯೇಕರ ಹೃದಯದಲ್ಲಿ ಮೂಡಿಸಿದರಷ್ಟೇ. ಅಲ್ಲದೇ ಅಂಧಶ್ರದ್ಧೆ ಮತ್ತು ಪೊಳ್ಳು ಭಕ್ತಿಯ ಅಂಧಕಾರದಿಂದ ಮನುಷ್ಯರನ್ನು ಪರಾವರ್ತಿತಗೊಳಿಸಿ ಸತ್ಯೆ ಅನ್ವೇಷಣೆ ಮತ್ತು ಮನುಷ್ಯನ ಅಂತರಂಗದಲ್ಲಿಯ ಪರಮಾತ್ಮನ ದರ್ಶನದಂಥ ಕ್ರಾಂತಿಕಾರಕ ಜ್ಞಾನ ಆಧಾರಿತ ಪ್ರಗತಿಪರ ಸಮಾಜ ರಚನೆಯ ಆದ್ಯ ಪುರುಷರಾದಂಥ ಜಗಜ್ಯೋತಿ ಮಹಾತ್ಮ ಬಸವಣ್ಣನವರ 886ನೇ ಜಯಂತ್ಯುತ್ಸವ ಏಪ್ರಿಲ್ 26 ರಂದು ಒದಗಿ ಬಂದಿದೆ. ನಾವೆಲ್ಲರೂ ಶ್ರದ್ಧೆಯಿಂದ ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸಲಿದ್ದೇವೆ. ಆ ಪವಿತ್ರ ದಿನದಂದು ಇಡೀ ಜಗತ್ತಿಗೆ ಆವರಿಸಿರುವ ಕೋವಿಡ್-19 ಮಹಾಮಾರಿ ರೋಗ ಬೇಗ ದೂರವಾಗಲಿ, ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಆರೋಗ್ಯ ತುಂಬಲೆಂದು ಧರ್ಮಗುರು ಬಸವಣ್ಣನವರಲ್ಲಿ ಪ್ರಾರ್ಥಿಸೋಣ.