ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಾ.ಅಂಬಾದಾಸ ಜಮಾದಾರ, ಮುಖ್ಯ ಶಿಕ್ಷಣ ಮಾಣಿಕರಾವ್ ಮಳಗೆ, ಗುಂಡುಪ್ರಸಾದ, ಅಲ್ತಾಫ್, ಎಇಇ ಶರಣಗೌಡ ಪಾಟೀಲ, ಶಿವರಾಜ ಪಲ್ಲೇರಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಶಂಕರ ನಾಗದೆ, ಅರವಿಂದ ಮುತ್ತೆ ಪಾಲ್ಗೊಂಡಿದ್ದರು.ನಂತರ ಬೆಟಬಾಲ್ಕುಂದಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.