ಭಾಲ್ಕಿ: ತಾಲ್ಲೂಕಿನ ಖಾನಾಪುರ ಗ್ರಾಮದ ಮಲ್ಲಣ್ಣ ದೇವಸ್ಥಾನದಲ್ಲಿ ಭಾನುವಾರ ಮಲ್ಲಣ್ಣ ದೇವರ ಜಾತ್ರೆ ಅಂಗವಾಗಿ ಸಚಿವ ಪ್ರಭು ಚವಾಣ್ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗೆ ಪ್ರಾರ್ಥಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ ಮೇತ್ರೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಸುರೇಶ ಭೋಸ್ಲೆ, ಧೋಂಡಿಬಾ ನರೋಟೆ, ಶರಣಪ್ಪಾ ಪಂಚಾಕ್ಷರಿ ಹಾಗೂ ಗಿರೀಶ ವಡೆಯರ್ ಅವರು ಇದ್ದರು.